ನವದೆಹಲಿ: ಹಲವಾರು ವರ್ಷಗಳ ಹಿಂದೆ ಭಾರತದಿಂದ ಅಕ್ರಮವಾಗಿ ವಿದೇಶಗಳಿಗೆ ಸಾಗಿಸಲ್ಪಟ್ಟಿದ್ದ ಭಾರತದ ಪ್ರಾಚೀನ ಅತ್ಯಮೂಲ್ಯ ವಿಗ್ರಹಗಳು ಇದೀಗ ಮತ್ತೆ ಭಾರತವನ್ನು ಸೇರುತ್ತಿವೆ. ಕೇಂದ್ರ ಸರ್ಕಾರದ ಅವಿರತ ಪರಿಶ್ರಮದಿಂದ ವಿಗ್ರಹಗಳು ಮರಳಿ ಬರುತ್ತಿವೆ. ಇದೀಗ ಇಟಲಿಯಲ್ಲಿದ್ದ 1,200 ವರ್ಷ ಹಳೆಯ ಬುದ್ಧನ ಪ್ರತಿಮೆ ಭಾರತವನ್ನು ಸೇರಿದೆ.
ಭಾರತದಿಂದ ಅಕ್ರಮವಾಗಿ ಸಾಗಾಣೆಗೊಂಡ 20 ವರ್ಷಗಳ ನಂತರ ಅತ್ಯಂತ ವಿಶೇಷ ‘ಅವಲೋಕಿತೇಶ್ವರ ಪದಮಾಪಣಿ’ ವಿಗ್ರಹವನ್ನು ಮರಳಿ ವಶಪಡಿಸಿಕೊಳ್ಳಲಾಗಿದೆ ಎಂದು ಇಟಲಿಯ ಮಿಲನ್ನಲ್ಲಿರುವ ಭಾರತೀಯ ದೂತಾವಾಸ ಶುಕ್ರವಾರ ತಿಳಿಸಿದೆ.
“ಈ ವಿಗ್ರಹವು 2000 ರ ಆರಂಭದಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಣೆಯಾಗಿದ್ದು, ಅದುವರೆಗೆ ಈ ವಿಗ್ರಹವು ದೇವಿಸ್ಥಾನ ಕುಂದುಲ್ಪುರ್ ದೇವಸ್ಥಾನದಲ್ಲಿ ಸುಮಾರು 1200 ವರ್ಷಗಳವರೆಗೆ ಇತ್ತು” ಎಂದು ಹೇಳಿದೆ.
ಕಲ್ಲಿನ ವಿಗ್ರಹವು 8 ನೇ-12 ನೇ ಶತಮಾನದಷ್ಟು ಹಿಂದಿನದು. ಅವಲೋಕಿತೇಶ್ವರನು ತನ್ನ ಎಡಗೈಯಲ್ಲಿ ಅರಳಿದ ಕಮಲದ ಕಾಂಡವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಬೌದ್ಧಧರ್ಮದಲ್ಲಿ, ಅವಲೋಕಿತೇಶ್ವರನು ಎಲ್ಲಾ ಬುದ್ಧರ ಕರುಣೆಯನ್ನು ಸಾಕಾರಗೊಳಿಸುವ ಬೋಧಿಸತ್ವ ಎನ್ನಲಾಗಿದೆ.
ಈ ಶಿಲ್ಪವು ಇಟಲಿಯ ಮಿಲನ್ನಲ್ಲಿ ನೆಲೆಗೊಳ್ಳುವ ಮೊದಲು ಫ್ರಾನ್ಸ್ನ ಕಲಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಸಿಂಗಾಪುರದ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಮತ್ತು ಲಂಡನ್ನ ಆರ್ಟ್ ರಿಕವರಿ ಇಂಟರ್ನ್ಯಾಷನಲ್ ಈ ಕದ್ದ ವಿಗ್ರಹವನ್ನು ಗುರುತಿಸಲು ಮತ್ತು ಹಿಂದಿರುಗಿಸಲು ತ್ವರಿತವಾಗಿ ಸಹಾಯ ಮಾಡಿದೆ” ಎಂದು ದೂತವಾಸ ತಿಳಿಸಿದೆ.
Delighted to be part of recovery and restitution of priceless 8th century stone statue of Avalokiteshwara Padamapani – missing since early 2000 from Devisthan Kundulpur Temple Bihar, India. 1/2…
— India in Milan (@CGIMilan) February 10, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.