ನವದೆಹಲಿ: ಹಿರಿಯರ ಸದನ ಎಂದು ಕರೆಸಿಕೊಳ್ಳುವ ರಾಜ್ಯಸಭೆಯ ಕಲಾಪಗಳು ಉತ್ತಮ ರೀತಿಯಲ್ಲಿ ಫಲಪ್ರದವಾಗಿ ನಡೆಯುತ್ತಿದೆ. ಬಜೆಟ್ ಅಧಿವೇಶನದ ಮೊದಲ ವಾರದಲ್ಲಿ ರಾಜ್ಯಸಭೆಯು ವಾರಕ್ಕೆ 100 ಪ್ರತಿಶತ ಉತ್ಪಾದಕತೆಯನ್ನು ಸಾಧಿಸಿದೆ.
“ಈ ವಾರದಲ್ಲಿ ಯಾವುದೇ ಮುಂದೂಡಿಕೆಗಳಿಲ್ಲ ಮತ್ತು ಯಾವುದೇ ದೊಡ್ಡ ಅಡೆತಡೆಗಳಿಲ್ಲ” ಎಂದು ಮೂಲವೊಂದು ತಿಳಿಸಿದೆ.
ಸಂಸತ್ತಿನ ಮೇಲ್ಮನೆ ಅಂತಿಮವಾಗಿ ಲಭ್ಯವಿರುವ 15 ಗಂಟೆಗಳ 17 ನಿಮಿಷಗಳ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಜನವರಿ 31 ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಸಾಂಪ್ರದಾಯಿಕ ಭಾಷಣದ ನಂತರ ಮೊದಲ ವಾರದಲ್ಲಿ, ರಾಜ್ಯಸಭಾ ಸದಸ್ಯರು ಏಳು ಗಂಟೆಗಳ 41 ನಿಮಿಷಗಳ ಕಾಲ ರಾಷ್ಟ್ರಪತಿಗಳಿಗೆ ಕೃತಜ್ಞತೆಯ ನಿರ್ಣಯವನ್ನು ಚರ್ಚಿಸಿದರು. ಶುಕ್ರವಾರದವರೆಗೆ ಬಹು ಪಕ್ಷಗಳ 26 ಸಂಸದರು ಮಾತನಾಡಿದ್ದಾರೆ.
ಸದನದ ವ್ಯವಹಾರ ಸಲಹಾ ಸಮಿತಿಯು ಈ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಉತ್ತರ ಸೇರಿದಂತೆ 12 ಗಂಟೆಗಳ ಕಾಲಾವಕಾಶ ನೀಡಿತ್ತು. ಸೋಮವಾರವೂ ಚರ್ಚೆ ಮುಂದುವರಿಯುವ ನಿರೀಕ್ಷೆಯಿದ್ದು, ಫೆಬ್ರವರಿ 8ರ ಮಂಗಳವಾರ ಚರ್ಚೆಗೆ ಪ್ರಧಾನಿ ಉತ್ತರ ನೀಡುವ ಸಾಧ್ಯತೆ ಇದೆ.
ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಈ ಹಿಂದೆ ಫೆಬ್ರವರಿ 11 ರವರೆಗೆ ಅಧಿವೇಶನದ ಮೊದಲಾರ್ಧವನ್ನು ಮುಂದುವರಿಸಲು ಶಿಫಾರಸು ಮಾಡಿದೆ. ಅಧಿವೇಶನದ ದ್ವಿತೀಯಾರ್ಧವು ಮಾರ್ಚ್ 14 ರಿಂದ ಪುನರಾರಂಭಗೊಂಡು ಏಪ್ರಿಲ್ 8 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.