ತಿರುವನಂತಪುರಂ: ಕಮ್ಯೂನಿಷ್ಟರ ನಿಷ್ಠೆ ಯಾವತ್ತಿದ್ದರೂ ಚೀನಾದ ಕಡೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಭಾರತದ ಪ್ರಜಾಪ್ರಭುತ್ವ ನೀಡಿದ ಹಕ್ಕುಗಳನ್ನು ಅನುಭವಿಸುತ್ತಿರುವ ಇವರುಗಳು ಚೀನಾದ ಗುಣಗಾನ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಕೇರಳದ ಸಿಪಿಐ(ಎಂ) ತನ್ನ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸುತ್ತಿರುವ ವಿಷಯ ಈಗ ಬಹಿರಂಗವಾಗಿದೆ.
ಎನ್ಡಿಎ ಮೈತ್ರಿ ಪಕ್ಷ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಜಾರ್ಜ್ ಸಬಾಸ್ಟಿನ್ ಅವರು ಈ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದು, ಕೇರಳದ ಆಡಳಿತರೂಢ ಸಿಪಿಐಎಂ ತನ್ನ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸುತ್ತಿದೆ ಎಂದಿದ್ದಾರೆ.
ಭಾರತದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಸಿಪಿಐಎಂ ತನ್ನ ಜಿಲ್ಲಾ ಮಟ್ಟದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸುತ್ತಿದೆ. ಇದು ದೇಶದ ವಿರೋಧಿ ಚಟುವಟಿಕೆಗೆ ಸಮಾನವಾಗಿದೆ. ಇವರಗೆ ಚೀನಾದಿಂದ ಫಂಡಿಂಗ್ ಬರುತ್ತಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿಪಿಐಎಂ ಚೀನಾದ ಬಗ್ಗೆ ಯಾವ ತರನಾದ ನಿಲುವನ್ನು ಹೊಂದಿದೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು ಎಂದು ಕಳೆದ ವಾರ ಪ್ರತಿಪಕ್ಷ ನಾಯಕ ವಿ.ಡಿ ಸತಿಶನ್ ಆಗ್ರಹಿಸಿದ್ದರು.
ಭಾರತದ ಬಗ್ಗೆ ಸದಾ ನಕಾರಾತ್ಮಕ ವಿಷಯಗಳನ್ನೇ ಹರಡುವ ಭಾರತದ ಕಮ್ಯೂನಿಷ್ಟರು ಚೀನಾದ ಬಗ್ಗೆ ಮಾತ್ರ ಸಕಾರಾತ್ಮಕ ಭಾವನೆಗಳನ್ನೇ ಹೊರಹಾಕುತ್ತಾರೆ. ಇವರ ನಿಜವಾದ ನಿಷ್ಠೆ ಯಾರ ಪರ ಎಂಬುದು ಭಾರತೀಯರ ಮುಂದೆ ಬಯಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.