ನವದೆಹಲಿ: ಕೆನಡಾ ಮೂಲದ ಸಿಖ್ ನಾಯಕ ರಿಪುದಮನ್ ಸಿಂಗ್ ಮಲಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸಿಖ್ ಸಮುದಾಯಕ್ಕಾಗಿ ಮೋದಿ ಸರ್ಕಾರ ಕೈಗೊಂಡ ಅಭೂತಪೂರ್ವ ಕ್ರಮಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
“ವಿದೇಶದಲ್ಲಿ ವಾಸಿಸುವ ಸಾವಿರಾರು ಸಿಖ್ಖರು ಭಾರತಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಿದ ಕಪ್ಪುಪಟ್ಟಿಗಳನ್ನು ತೆಗೆದುಹಾಕುವುದು, ಪಾಸ್ಪೋರ್ಟ್ಗಳು ಮತ್ತು ವೀಸಾಗಳ ಮಂಜೂರಾತಿ, 1984 ರ ನೂರಾರು ಗಲಭೆಗಳ ಮುಚ್ಚಿದ ಪ್ರಕರಣಗಳನ್ನು ಪುನಃ ತೆರೆಯುವ ನಿರ್ಧಾರ, ಗಲಭೆ ಸಂತ್ರಸ್ಥರಿಗೆ ಪರಿಹಾರ , ಶ್ರೀ ಕರ್ತಾರ್ಪುರ ಸಾಹೇಬ್ ಕಾರಿಡಾರ್ ತೆರೆಯುವ ಮೂಲಕ ನಮ್ಮ ಮೊದಲ ಗುರು ನಾನಕ್ ದೇವ್ ಜಿ ಅವರ ಪೂಜ್ಯ ಸ್ಥಳಕ್ಕೆ ಭೇಟಿ ನೀಡಲು ಭಾರತದಿಂದ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಸೇರಿದಂತೆ ದೀರ್ಘಾವಧಿಯ ಸಿಖ್ ಬೇಡಿಕೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ನೀವು ತೆಗೆದುಕೊಂಡ ಅಭೂತಪೂರ್ವ ಸಕಾರಾತ್ಮಕ ಕ್ರಮಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಗುರು ಗೋಬಿಂದ್ ಸಿಂಗ್ ಅವರ ಪುತ್ರರು ಹುತಾತ್ಮರಾದ ಡಿಸೆಂಬರ್ 26 ಅನ್ನು ‘ವೀರ್ ಬಾಲ್ ದಿವಸ್’ ಎಂದು ಘೋಷಿಸುವುದರ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮೋದಿ ಸರ್ಕಾರ ಮತ್ತು ಭಾರತದ ವಿರುದ್ಧ ಸಿಖ್ ಸಮುದಾಯದ ಕೆಲವು ದಾರಿ ತಪ್ಪಿದ ಸದಸ್ಯರು ನಡೆಸುತ್ತಿರುವ ಅಭಿಯಾನದ ಬಗ್ಗೆ ಸಿಂಗ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭಾರತವನ್ನು ಅಸ್ಥಿರಗೊಳಿಸಲು ಮತ್ತು ಅದರ ರಾಷ್ಟ್ರೀಯ ಸಮಗ್ರತೆಗೆ ಸವಾಲು ಹಾಕಲು ಕೆಲವರು ವಿದೇಶಿ ಶಕ್ತಿಗಳ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ಸಿಂಗ್ ಭರವಸೆ ನೀಡಿದ್ದಾರೆ.
ಸಿಖ್ ಸಮುದಾಯಕ್ಕೆ ಪ್ರತ್ಯೇಕವಾಗಿ ಬರೆದಿರುವ ಪತ್ರದಲ್ಲಿ ಸಿಂಗ್ ಅವರು ಕೆಟ್ಟ ಮತ್ತು ಪ್ರೇರಿತ ಅಭಿಯಾನದಿಂದ ದೂರವಿರುವಂತೆ ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.