ಲಂಡನ್: 40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಗ್ರಾಮವೊಂದರ ದೇವಸ್ಥಾನದಿಂದ ನಾಪತ್ತೆಯಾಗಿದ್ದ 10 ನೇ ಶತಮಾನದ ಪ್ರಾಚೀನ ಭಾರತೀಯ ವಿಗ್ರಹವು ಶುಕ್ರವಾರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಭಾರತಕ್ಕೆ ವಾಪಾಸ್ ಸಿಕ್ಕಿದೆ. ಈ ವಿಗ್ರಹ ಇಂಗ್ಲೆಂಡ್ನ ಉದ್ಯಾನವೊಂದರಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.
ವಿಗ್ರಹವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡಿದ ಆರ್ಟ್ ರಿಕವರಿ ಇಂಟರ್ನ್ಯಾಶನಲ್ನ ಕ್ರಿಸ್ ಮರಿನೆಲ್ಲೊ ಅವರಿಂದ ಲಂಡನ್ನಲ್ಲಿರುವ ಭಾರತದ ಹೈಕಮಿಷನರ್ ಗಾಯಿತ್ರಿ ಇಸ್ಸಾರ್ ಕುಮಾರ್ ವಿಗ್ರಹ ಸ್ವೀಕರಿಸಿದ್ದು ಅದನ್ನು ಭಾರತಕ್ಕೆ ಕಳುಹಿಸಿಕೊಡಲಿದ್ದಾರೆ.
ಬುಂದೇಲ್ಖಂಡ್ನ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಿಂದ ಯೋಗಿನಿ ಪ್ರತಿಮೆಗಳ ಭಾಗವಾಗಿರುವ ಈ ಶಿಲ್ಪವನ್ನು ನಿನ್ನೆ ಭಾರತಕ್ಕೆ ತಂತರಲಾಗಿದೆ. ಇದನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಲಂಡನ್ನ ಇಂಡಿಯಾ ಹೌಸ್ನಲ್ಲಿ ನಡೆದ ಹಸ್ತಾಂತರ ಸಮಾರಂಭದಲ್ಲಿ ಗಾಯತ್ರಿ ಇಸ್ಸಾರ್ ಕುಮಾರ್ ಮಾತನಾಡಿ, “ಮಕರ ಸಂಕ್ರಾಂತಿಯಂದು ಈ ಯೋಗಿನಿಯನ್ನು ಸ್ವೀಕರಿಸುವುದು ತುಂಬಾ ಮಂಗಳಕರವಾದ ಸಂದರ್ಭ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.