ನವದೆಹಲಿ: ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶ ಮತ್ತು ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪ್ರಯಾಣಿಕರಿಗೆ ಸುರಕ್ಷತೆ, ಭದ್ರತೆ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿದೆ.
2021 ರಲ್ಲಿ ಅದು “ಮಿಷನ್ ಜೀವನ್ ರಕ್ಷಾ” ಅಡಿಯಲ್ಲಿ 601 ವ್ಯಕ್ತಿಗಳ ಜೀವವನ್ನು ಆರ್ಪಿಎಫ್ ಉಳಿಸಿದೆ. ಮಾತ್ರವಲ್ಲದೇ ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಿಸಲಾಗಿದೆ.
“ಆಪರೇಷನ್ ಅಮಾನತ್” ಅಡಿಯಲ್ಲಿ ರೈಲ್ವೆಯು ತನ್ನ 12,377 ಪ್ರಯಾಣಿಕರಿಗೆ ಸೇರಿದ 23 ಕೋಟಿಗೂ ಹೆಚ್ಚು ಲಗೇಜ್ನ ಅನ್ನು ಹಿಂದಿರುಗಿಸಿದೆ.
ದುಷ್ಕೃತ್ಯಕ್ಕೆ ಸಂಬಂಧಿಸಿಂತೆ 4,100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ, 4,600 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ, 2.8 ಕೋಟಿ ಮೌಲ್ಯದ ರೈಲ್ವೇ ಟಿಕೆಟ್ಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಪ್ರಮುಖ ರೈಲು ನಿಲ್ದಾಣಗಳಲ್ಲಿ 244 “ಮೇರಿ ಸಹೇಲಿ” ತಂಡಗಳನ್ನು ನಿಯೋಜಿಸಲಾಗಿದೆ
ಕಳೆದ ನಾಲ್ಕು ವರ್ಷಗಳಲ್ಲಿ ರೈಲು ಚಕ್ರದಡಿ ಸಿಲುಕಬಹುದಾಗಿದ್ದ 1600 ಜೀವಗಳನ್ನು ಆರ್ ಪಿಎಫ್ ಸಿಬ್ಬಂದಿ ಕಾಪಾಡಿದ್ದಾರೆ. ಆರ್ಪಿಎಫ್ ಸಿಬ್ಬಂದಿಯ ಶೌರ್ಯವನ್ನು ಪರಿಗಣಿಸಿ ಈವರೆಗೂ 9 ಜೀವನ್ ರಕ್ಷಾ ಪದಕ ಹಾಗೂ 1 ಶೌರ್ಯ ಪದಕವನ್ನು ಆರ್ಪಿಎಫ್ ಸಿಬ್ಬಂದಿ ರಾಷ್ಟ್ರಪತಿಯಿಂದ ಪಡೆದಿದ್ದಾರೆ.
522 ಆಕ್ಸಿಜನ್ ವಿಶೇಷ ರೈಲುಗಳನ್ನು ತ್ವರಿತವಾಗಿ ಸಾಗಾಣೆ ಮಾಡಲು ಸಹಾಯ ಮಾಡುವ ಮೂಲಕ ರೈಲ್ವೆ ರಕ್ಷಣಾ ಪಡೆ ಅನೇಕರ ಪ್ರಾಣ ಉಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.