ನವದೆಹಲಿ: ವಸಾಹತುಶಾಹಿಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ರಾಣಿ ವೇಲು ನಾಚಿಯಾರ್ ಅವರ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಅವರನ್ನು ಸ್ಮರಿಸಿದ್ದಾರೆ ಮತ್ತು ಅವರ ಅದಮ್ಯ ಧೈರ್ಯ ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಅವರ ಬದ್ಧತೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು ರಾಣಿಯನ್ನು ಮಹಿಳಾ ಸಬಲೀಕರಣದ ಮೇರು ವ್ಯಕ್ತಿತ್ವ ಎಂದು ಕರೆದಿದ್ದಾರೆ.
ಟ್ವಿಟ್ಟರ್ ಮಾಡಿರುವ ಪ್ರಧಾನಿ ಮೋದಿ, “ಧೀರ ರಾಣಿ ವೇಲು ನಾಚಿಯಾರ್ ಅವರನ್ನು ಅವರ ಜನ್ಮ ವಾರ್ಷಿಕೋತ್ಸವದಂದು ಸ್ಮರಿಸುತ್ತಿದ್ದೇನೆ. ಅವರ ಅದಮ್ಯ ಧೈರ್ಯವು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತಲೇ ಇರುತ್ತದೆ. ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಅವರ ಬಲವಾದ ಬದ್ಧತೆ ಗಮನಾರ್ಹವಾಗಿದೆ. ಅವರು ನಮ್ಮ ನಾರಿ ಶಕ್ತಿಯನ್ನು ಪ್ರತಿಬಿಂಬಿಸುತ್ತಾರೆ” ಎಂದಿದ್ದಾರೆ.
1730 ರಲ್ಲಿ ಜನಿಸಿದ ರಾಣಿ ವೇಲು ನಾಚಿಯಾರ್, 1780-1790 ರ ಅವಧಿಯಲ್ಲಿ ಶಿವಗಂಗಾ ಎಸ್ಟೇಟ್ನ ರಾಣಿಯಾಗಿದ್ದರು, ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿ ಈಕೆ. ಆಕೆಯನ್ನು ತಮಿಳರು ವೀರಮಂಗೈ ಎಂದು ಕರೆಯುತ್ತಾರೆ.
Remembering the brave Rani Velu Nachiyar on her birth anniversary. Her indomitable courage shall keep motivating the coming generations. Her strong commitment to fight colonialism was remarkable. She personifies the spirit of our Nari Shakti.
— Narendra Modi (@narendramodi) January 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.