ನವದೆಹಲಿ: ಪಾಕಿಸ್ಥಾನ ಮತ್ತು ಚೀನಾದ ವೈಮಾನಿಕ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಭಾರತೀಯ ವಾಯುಸೇನೆಯ ಪಂಜಾಬ್ ವಲಯದಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಮೊದಲ ಸ್ಕ್ವಾಡ್ರನ್ ಅನ್ನು ನಿಯೋಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
“ಮೊದಲ ಸ್ಕ್ವಾಡ್ರನ್ ಅನ್ನು ಪಂಜಾಬ್ ವಲಯದಲ್ಲಿ ನಿಯೋಜಿಸಲಾಗುತ್ತಿದೆ. ಮೊದಲ ಸ್ಕ್ವಾಡ್ರನ್ ಪಾಕಿಸ್ಥಾನ ಮತ್ತು ಚೀನಾ ಎರಡರಿಂದಲೂ ವೈಮಾನಿಕ ಬೆದರಿಕೆಗಳನ್ನು ನಿಭಾಯಿಸಲು ಸಮರ್ಥವಾಗಿರುತ್ತವೆ” ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.
ಕ್ಷಿಪಣಿ ವ್ಯವಸ್ಥೆಯ ಹಲವಾರು ಭಾಗಗಳು ಡಿಸೆಂಬರ್ ಆರಂಭದಲ್ಲಿ ಭಾರತವನ್ನು ತಲುಪಿವೆ. ಮುಂದಿನ ಕೆಲವು ವಾರಗಳಲ್ಲಿ ಸಂಪೂರ್ಣ ಘಟಕವು ಕಾರ್ಯನಿರ್ವಹಿಸಲಿದೆ.
ರಕ್ಷಣಾ ವ್ಯವಸ್ಥೆಯ ಉಪಕರಣಗಳನ್ನು ದೇಶಕ್ಕೆ ತರಲು ಸಮುದ್ರ ಮತ್ತು ವಾಯು ಮಾರ್ಗಗಳೆರಡನ್ನೂ ಬಳಸಲಾಗುತ್ತಿದೆ.
ರಷ್ಯಾದೊಂದಿಗೆ ಸಹಿ ಹಾಕಿರುವ 35,000 ಕೋಟಿ ರೂ.ಗಳ ಒಪ್ಪಂದದ ಮೂಲಕ ಭಾರತ ಸ್ವಾಧೀನಪಡಿಸಿಕೊಳ್ಳಲಿರುವ ಐದು ಸ್ಕ್ವಾಡ್ರನ್ಗಳು 400 ಕಿ.ಮೀ.ವರೆಗಿನ ವೈಮಾನಿಕ ಬೆದರಿಕೆಗಳನ್ನು ನಿಭಾಯಿಸಬಲ್ಲವು. ಐಎಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗಾಗಲೇ ಈ ವ್ಯವಸ್ಥೆಯನ್ನು ಬಳಸಿಕೊಳ್ಳುವ ಕುರಿತು ರಷ್ಯಾದಲ್ಲಿ ತರಬೇತಿ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.