ನವದೆಹಲಿ: ಹಿಂದೂ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಕುರಿತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು, ಸಂಸ್ಕೃತವನ್ನು ಕಲಿತು ಮಹಾಭಾರತದ ಕುರಿತು ಡಾಕ್ಟರೇಟ್ ಮಾಡುವುದಾಗಿ ಹೇಳಿದ್ದಾರೆ.
ಖಾತಿಯಲ್ಲಿ ಭಗವಾನ್ ಪರಶುರಾಮರ ತಪೋಸ್ಥಲದ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಅವರು, ಮೂರು ಹಿಂದೂ ಗ್ರಂಥಗಳ ಸಂದೇಶವನ್ನು ಸಂಶೋಧನಾ ಕೇಂದ್ರ ಪ್ರದರ್ಶಿಸಲಿದೆ ಎಂದು ಹೇಳಿದರು.
ಹಿಂದಿನಿಂದಲೂ ಈ ಗ್ರಂಥಗಳು ಇಡೀ ಮನುಕುಲಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದು, ಇವುಗಳ ಸಂದೇಶವನ್ನು ಜನಸಾಮಾನ್ಯರಲ್ಲಿ ಅತ್ಯಂತ ಸರಳ ರೂಪದಲ್ಲಿ ಪ್ರಸಾರ ಮಾಡಲು ಸಂಶೋಧನಾ ಕೇಂದ್ರವು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಬ್ರಾಹ್ಮಣ ಸಮುದಾಯದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.
ಸಂಸ್ಕೃತ ಭಾಷೆ ಕಲಿತು ಮಹಾಭಾರತದ ಬಗ್ಗೆ ಡಾಕ್ಟರೇಟ್ ಮಾಡುತ್ತೇನೆ ಎಂದು ಚನ್ನಿ ಹೇಳಿದರು.
“ನನ್ನ ಜೀವನವನ್ನು ಅರ್ಥಪೂರ್ಣ ಮತ್ತು ನ್ಯಾಯಯುತವಾಗಿಸಲು ಪ್ರತಿದಿನ ಭಗವದ್ಗೀತೆಯ ಒಂದು ಶ್ಲೋಕವನ್ನು ಕಲಿಯಲು ಬ ವಿದ್ವಾಂಸರು ನನಗೆ ಹೇಳಿದರು. ಗೀತಾ ಉಪದೇಶವು ಅಪ್ರತಿಮವಾಗಿದೆ. ನನ್ನ ಪ್ರಸ್ತುತ ಪಿಎಚ್ಡಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ನಂತರ ನಾನು ಸಂಸ್ಕೃತ ಮತ್ತು ಮಹಾಭಾರತದ ಬಗ್ಗೆ ಪಿಎಚ್ಡಿ ಮಾಡುತ್ತೇನೆ, ”ಎಂದು ಅವರು ಹೇಳದ್ದಾರೆ.
ರಾಜ್ಯದಲ್ಲಿ ಬಿಡಾಡಿ ದನಗಳ ಸರಿಯಾದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಬ್ರಾಹ್ಮಣ ಕಲ್ಯಾಣ ಮಂಡಳಿಗೆ ಈ ಕಾರ್ಯವನ್ನು ವಹಿಸಲಾಗುವುದು ಎಂದು ಮುಖ್ಯಮಂತ್ರಿ ಚನ್ನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.