ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸಿಎಜಿ ಕಚೇರಿ ಆವರಣದಲ್ಲಿ ಮೊದಲ ಆಡಿಟ್ ದಿವಸ್ ಅನ್ನು ಉದ್ದೇಶಿಸಿ ಮಾತನಾಡಿದರು.
“ಸಿಎಜಿ (Comptroller and Auditor Genera) ಒಂದು ಪರಂಪರೆಯಾಗಿದೆ ಮತ್ತು ಪ್ರತಿ ಪೀಳಿಗೆಯೂ ಅದನ್ನು ಪಾಲಿಸಬೇಕು. ಸಿಎಜಿ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಈ ಸಂಸ್ಥೆಯು ಉತ್ಪಾದಕತೆ ಮತ್ತು ದಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು.
“ಸಮಯ ಕಳೆದಂತೆ ಬಲಿಷ್ಠ, ಪ್ರಬುದ್ಧ ಮತ್ತು ಹೆಚ್ಚು ಪ್ರಸ್ತುತವಾಗುವ ಸಂಸ್ಥೆಗಳು ಕೆಲವೇ ಇವೆ. ಕೆಲವು ದಶಕಗಳ ನಂತರ ಹೆಚ್ಚಿನ ಸಂಸ್ಥೆಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ, ಆದರೆ ಸಿಎಜಿ ಒಂದು ಪರಂಪರೆಯಾಗಿದೆ ಮತ್ತು ಪ್ರತಿ ಪೀಳಿಗೆಯು ಅದನ್ನು ಪಾಲಿಸಬೇಕು. ಲೆಕ್ಕಪರಿಶೋಧನೆಯು ಭಯದೊಂದಿಗೆ ಸಂಬಂಧಿಸಿರುವುದರಿಂದ ಹಿಂದೆ ಇದು ಸಿಎಜಿ ವರ್ಸಸ್ ಸರ್ಕಾರ ಎಂದಾಗಿತ್ತು” ಎಂದು ಪ್ರಧಾನಿ ಹೇಳಿದರು.
1860 ರ ನವೆಂಬರ್ 16 ರಂದು ಮೊದಲ ಆಡಿಟರ್ ಜನರಲ್ ಅಧಿಕಾರ ವಹಿಸಿಕೊಂಡ ಸ್ಮರಣಾರ್ಥ ಇಂದಿನಿಂದ ಪ್ರತಿ ವರ್ಷ ನವೆಂಬರ್ 16 ರಂದು ಆಡಿಟ್ ದಿವಸ್ ಅನ್ನು ಆಚರಿಸಲಾಗುತ್ತದೆ ಎಂದು ಭಾರತದ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಗಿರೀಶ್ ಮುರ್ಮು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಜಿ ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು.
ಸಿಎಜಿ ಸಂಸ್ಥೆಯ ಐತಿಹಾಸಿಕ ಮೂಲಗಳು ಮತ್ತು ಕಳೆದ ಹಲವು ವರ್ಷಗಳಿಂದ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಅದು ನೀಡಿದ ಕೊಡುಗೆಯನ್ನು ಗುರುತಿಸಲು ಆಡಿಟ್ ದಿವಸ್ ಅನ್ನು ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.