ನೌಶೇರಾ: ದೇಶದ ಗಡಿಯನ್ನು ಕಾವಲು ಕಾಯುತ್ತಿರುವ ಭಾರತೀಯ ಸೈನಿಕರನ್ನು ಗುರುವಾರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರದ “ಸುರಕ್ಷಾ ಕವಚ” ಎಂದು ಬಣ್ಣಿಸಿದ್ದಾರೆ. ಜನರು ನಿಶ್ಚಿಂತೆಯಿಂದ ಮಲಗಲು ಭಾರತೀಯ ಸೈನಿಕರೇ ಕಾರಣ ಎಂದು ಪ್ರಧಾನಿ ಹೇಳಿದ್ದಾರೆ.
ಯೋಧರೊಂದಿಗೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾದಲ್ಲಿ ದೀಪಾವಳಿ ಆಚರಿಸಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
“ನಮ್ಮ ಸೈನಿಕರು ತಾಯಿ ಭಾರತಿಯ ಸುರಕ್ಷಾ ಕವಚ. ಯೋಧರ ಕಾರಣದಿಂದಾಗಿ ನಮ್ಮ ದೇಶದ ಜನರು ನಿಶ್ವಿಂತೆಯಿಂದ ಮಲಗುತ್ತಿದ್ದಾರೆ ಮತ್ತು ಹಬ್ಬಗಳ ಸಮಯದಲ್ಲಿ ಜನರು ಸಂತೋಷದಿಂದ ಇರಲು ಯೋಧರೇ ಕಾರಣರು” ಎಂದು ಪ್ರಧಾನಮಂತ್ರಿ ಅವರು ನೌಶೇರಾ ಸೆಕ್ಟರ್ನಲ್ಲಿ ಸೈನಿಕರನ್ನು ಉದ್ದೇಶಿಸಿ ಹೇಳಿದರು. .
“ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ” ಎಂದು ಅವರು ಹೇಳಿದರು.
#WATCH Prime Minister Narendra Modi along with Indian Army Jawans chorused 'Bharat Mata Ki Ji' slogan at Nowshera, J&K pic.twitter.com/RcJ7ksai0f
— ANI (@ANI) November 4, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.