ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ (ಅ.ಭಾ.ಕಾ.ಮಂ)ಯು ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ಹಿಂಸೆಯನ್ನು ಬಲವಾಗಿ ಖಂಡಿಸುತ್ತದೆ. ಬಾಂಗ್ಲಾದೇಶವನ್ನುಮತ್ತಷ್ಟುಇಸ್ಲಾಮೀಕರಣಗೊಳಿಸಬೇಕು ಎಂಬ ಹುನ್ನಾರದಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಮುಂದುವರಿಯುತ್ತಿರುವ ಬರ್ಬರತೆಯನ್ನುಸಭೆಯು ಖಂಡಿಸುತ್ತದೆ.
ಹಿಂದುಗಳು ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣವು ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ದುರ್ಗಾಪೂಜೆಯ ಸಂದರ್ಭದಲ್ಲಿ ಸ್ಫೋಟಗೊಂಡ ಕೋಮು ಹಿಂಸಾಚಾರದಲ್ಲಿ ನೂರಾರು ಹಿಂದುಗಳು ಬಲಿಯಾಗಿ, ಹಲವರು ಗಾಯಗೊಂಡು ಸಾವಿರಾರು ಕುಟುಂಬಗಳು ನೆಲೆಯಿಲ್ಲದೆವಿಸ್ಥಾಪಿತಗೊಂಡಿದೆ. ಹಿಂದು ಸಮಾಜದ ಹಲವು ಹೆಣ್ಣುಮಕ್ಕಳು, ಮಹಿಳೆಯರು ಹಲ್ಲೆಗೆ ಒಳಗಾಗಿದ್ದಾರೆ ಮತ್ತು ದುರ್ಗಾ ಪೂಜೆಯ ಸ್ಥಳ ಮತ್ತು ದೇವಸ್ಥಾನಗಳನ್ನು ಕಳೆದ ಎರಡು ವಾರಗಳಲ್ಲಿ ಛಿದ್ರಗೊಳಿಸಲಾಗಿದೆ.
ಈ ಕೃತ್ಯದಲ್ಲಿ ಭಾಗಿಗಳಾಗಿದ್ದರು ಎನ್ನಲಾದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹಿಂಸಾಕೃತ್ಯಗಳು ಇಸ್ಲಾಂ ಮೂಲಭೂತವಾದಿಗಳ ಯೋಜಿತ ಕಾರ್ಯಾಚರಣೆಎಂಬುದು ಬೆಳಕಿಗೆ ಬಂದಿದೆ.
ಈ ಹಲ್ಲೆಗಳು, ಭಾರತದ ವಿಭಜನೆಯ ನಂತರ ತೀವ್ರವಾಗಿ ಇಳಿಮುಖ ಕಾಣುತ್ತಿರುವ ಅಲ್ಪಸಂಖ್ಯಾತ ಹಿಂದೂ ಸಮಾಜವನ್ನೇ ಗುರಿಯಾಗಿಸಿಕೊಂಡು ಹಿಂದುಗಳನ್ನು ಬೇರು ಸಹಿತ ಕಿತ್ತೊಗೆಯಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಸುವ್ಯವಸ್ಥಿತ ಕೃತ್ಯವಾಗಿದೆ.
ವಿಭಜನೆಯ ಸಮಯದಲ್ಲಿ ಪೂರ್ವ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ 28% ಇದ್ದು ಈಗ ಅದು 8% ಕ್ಕೆಕುಸಿದಿದೆ. ಜಮಾತ್ – ಇ – ಇಸ್ಲಾಮೀ (ಬಾಂಗ್ಲಾದೇಶ) ಯಂತಹ ಮೂಲಭೂತವಾದಿ ಗುಂಪುಗಳ ಹಿಂಸಾಕೃತ್ಯವು ವಿಭಜನೆಯ ನಂತರ, ವಿಶೇಷವಾಗಿ 1971 ರ ಯುದ್ಧದ ನಂತರ ಭಾರಿ ಪ್ರಮಾಣದಲ್ಲಿ ಹಿಂದುಗಳನ್ನು ಭಾರತಕ್ಕೆ ವಲಸೆ ಹೋಗುವಂತೆ ಮಾಡಿದೆ. ಈ ಗುಂಪುಗಳು ಇಂದಿಗೂ ಬಾಂಗ್ಲಾದೇಶದಲ್ಲಿ ಕೋಮುಭಾವನೆಯನ್ನು ಪ್ರಚೋದಿಸುವುದರ ಮೂಲಕ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮನಸ್ಸಿನಲ್ಲಿ ಅಭದ್ರತೆಯನ್ನು ನಿರ್ಮಿಸಿವೆ.
ಅ.ಭಾ.ಕಾ.ಮಂ.ಯು ಬಾಂಗ್ಲಾದೇಶದ ಸರ್ಕಾರವು ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ತಡೆಗಟ್ಟಲು ಕಠಿಣಕ್ರಮಗಳನ್ನುತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತದೆ. ಹಿಂದೂ ವಿರೋಧಿ ಕೃತ್ಯವನ್ನು ಎಸಗಿದವರಿಗೆ ಅಲ್ಲಿನ ಸರ್ಕಾರವು ಕಠೋರಶಿಕ್ಷೆಯನ್ನುವಿಧಿಸುವುದರಮೂಲಕ ಅಲ್ಪಸಂಖ್ಯಾತ ಹಿಂದುಗಳು ಸುರಕ್ಷಿತವಾಗಿ, ಗೌರವಪೂರ್ವಕವಾಗಿ ಮತ್ತು ಸಕಲ ಹಕ್ಕುಗಳನ್ನುಬಳಸಿಕೊಂಡು ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕು.
ಅ.ಭಾ.ಕಾ.ಮಂ.ಯು ಸ್ವಘೋಷಿತ ಮಾನವ ಹಕ್ಕುಗಳ ಕಾವಲುಪಡೆಯ ಮತ್ತು ವಿಶ್ವಸಂಸ್ಥೆಗೆ ಸಂಲಗ್ನವಾಗಿರುವ ಇತರ ಸಂಸ್ಥೆಗಳ ಕಿವಿಗಡಚಿಕ್ಕುವ ಮೌನವನ್ನುಅಣಕಿಸುತ್ತದೆ. ಜಾಗತಿಕ ಸಮುದಾಯವು ಸ್ವಪ್ರೇರಿತವಾಗಿ ಮುಂದೆ ಬಂದು ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಾಗುತ್ತಿರುವ ಹಿಂಸೆಯನ್ನು ಖಂಡಿಸಬೇಕೆಂದು ಸಭೆಯು ಆವಾಹನೆನೀಡುತ್ತದೆ. ಇಸ್ಲಾಂ ಮೂಲಭೂತವಾದದ ಬೆಳವಣಿಗೆಯು ಬಾಂಗ್ಲಾದೇಶವಾಗಿರಲಿ ಅಥವಾ ಇನ್ನಾವುದೇ ಶಾಂತಿಪ್ರಿಯ ದೇಶವಾಗಿರಲಿ ಅಲ್ಲಿನ ಮಾನವಹಕ್ಕುಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆಮಾರಕವಾಗುತ್ತದೆಎಂಬುದನ್ನುಸಭೆಯು ಎಚ್ಚರಿಸುತ್ತದೆ.
ಲಭ್ಯವಿರುವ ಸರ್ವ ರೀತಿಯ ರಾಜತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ಪ್ರಪಂಚದ ಹಿಂದೂ ಸಮಾಜ ಮತ್ತು ಸಂಘಟನೆಗಳ ಕಾಳಜಿಯನ್ನು ಬಾಂಗ್ಲಾದೇಶದ ಸರ್ಕಾರಕ್ಕೆ ಮನನ ಮಾಡಿಸಿ ಅಲ್ಲಿನ ಹಿಂದೂ ಮತ್ತು ಬೌದ್ಧ ಸಮಾಜದ ಸುರಕ್ಷತೆಯನ್ನು ಕಾಪಾಡಲು ಮುಂದಾಗಬೇಕು ಎಂದು ಭಾರತ ಸರ್ಕಾರವನ್ನುಕಾರ್ಯಕಾರಿ ಮಂಡಳಿಯು ಆಗ್ರಹಿಸುತ್ತದೆ.
ಹಿಂದೂ ಸಂಘಟನೆಗಳು ಮತ್ತು ಸಂಸ್ಥೆಗಳಾದ ಇಸ್ಕಾನ್, ರಾಮಕೃಷ್ಣ ಮಿಷನ್, ಭಾರತ ಸೇವಾಶ್ರಮ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಉಳಿದೆಲ್ಲರೂ ಇಸ್ಲಾಂಮೂಲಭೂತವಾದದ ಹಿಂಸೆಗೆ ಬಲಿಯಾದವರ ಪರವಾಗಿ ನಿಂತದ್ದನ್ನು ಸಭೆಯು ಅನುಮೋದಿಸುತ್ತದೆ.
ಇಂತಹ ಕಠಿಣ ಸವಾಲಿನ ಸನ್ನಿವೇಶದಲ್ಲಿ ಆರೆಸ್ಸೆಸ್ಸ ಸಂಪೂರ್ಣ ಹಿಂದೂ ಸಮಾಜದ ಜೊತೆ ಬಾಂಗ್ಲಾದೇಶದಲ್ಲಿ ಪೀಡಿತರಾಗಿರುವ ಹಿಂದುಗಳು ಮತ್ತು ಉಳಿದ ಅಲ್ಪಸಂಖ್ಯಾತ ಸಮಾಜದ ಬೆಂಬಲಕ್ಕಿದೆ ಎಂಬುದನ್ನು ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ದೃಢೀಕರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.