ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು “ಆಜಾದಿ ಕಾ ಅಮೃತ್ ಮಹೋತ್ಸವ” ಆಚರಣೆಯ ಭಾಗವಾಗಿ ಶಾಲೆಗಳು, ರಸ್ತೆಗಳು ಮತ್ತು ಕಟ್ಟಡಗಳಿಗೆ ಹುತಾತ್ಮರು ಮತ್ತು ಗಣ್ಯ ವ್ಯಕ್ತಿಗಳ ಹೆಸರನ್ನು ಇಡಲು ಗುರುವಾರ ಅನುಮೋದನೆ ನೀಡಿದೆ.
ಹುತಾತ್ಮರ ಹೆಸರಿನಲ್ಲಿ ಸಾರ್ವಜನಿಕ ಮೂಲಸೌಕರ್ಯಗಳನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ಎಲ್ಜಿ ಸಿನ್ಹಾ ಅವರ ನೇತೃತ್ವದ ಆಡಳಿತ ಮಂಡಳಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
“ಕೇಂದ್ರಾಡಳಿತ ಪ್ರದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಅಸಾಧಾರಣ ಕೊಡುಗೆಗಳ ಗೌರವ ಮತ್ತು ಅಂಗೀಕಾರದ ಸಂಕೇತವಾಗಿ, ಕೆಲವು ಸಾರ್ವಜನಿಕ ಮೂಲಸೌಕರ್ಯಗಳಿಗೆ ಜಮ್ಮು ಮತ್ತು ಕಾಶ್ಮೀರದ ಹುತಾತ್ಮರು ಮತ್ತು ಜೀವಂತ ದಂತಕಥೆಗಳ ಹೆಸರನ್ನು ಮರುನಾಮಕರಣ ಮಾಡಲಾಗುವುದು” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಹುತಾತ್ಮರಾದ ಲೆಫ್ಟಿನೆಂಟ್ ಚುನಿ ಲಾಲ್, ಲೆಫ್ಟಿನೆಂಟ್. ಸೂರಜ್ ಪ್ರಕಾಶ್, ಲೆಫ್ಟಿನೆಂಟ್ ಎಚ್ಸಿ ಸಂಜೀವನ್ ಸಿಂಗ್, ಲೆಫ್ಟಿನೆಂಟ್ ಎಸ್ಪಿಒ ಬರ್ಕೆತ್ ಅಲಿ, ಕ್ಯಾಪ್ಟನ್ ಸಂಜಯ್ ಆರ್ಯ, ಸುದೇಶ್ ಕುಮಾರ್, ಡಿ.ಎಸ್.ಪಿ. ಗುಲ್ಬಧನ್ ಸಿಂಗ್, ಎಸ್ಐ ಸೇಥಿ ರಾಮ್, ಸಿ.ಟಿ. ಧೀರಜ್ ಕೊಹ್ಲಿ, ರಾಜ್ ಕುಮಾರ್, ಸಿ.ಟಿ. ಜಗದೇವ್ ಸಿಂಗ್, ಶಹೀದ್ ಪರ್ಶೋತಮ್ ಸಿಂಗ್, ಮೇಜರ್ ಅರವಿಂದ ಬಜಾಲ, ಹವಾಲ್ದಾರ್ ರಾಜ್ ಸಿಂಗ್ ಮುಂತಾದವರ ಹೆಸರುಗಳನ್ನು ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಸುರಕ್ಷತೆಗಾಗಿ ಹಾಗೂ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಅನೇಕ ಯೋಧರು, ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಹೆಸರುಗಳನ್ನು ಮೂಲಸೌಕರ್ಯಗಳಿಗೆ ಇಡುವುದು ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.