ನವದೆಹಲಿ : ಸಾಂಕ್ರಾಮಿಕ ರೋಗದ ನಂತರ ಭಾರತದ ಫಾರ್ಮಾ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಇನ್ವೆಸ್ಟ್ ಇಂಡಿಯಾದ ಹೂಡಿಕೆದಾರರ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಮಾತನಾಡಿದ ಡಾ. ಮಾಂಡವಿಯಾ, ಸರ್ಕಾರ ಸದಾ ಕೈಗಾರಿಕೆ ಮತ್ತು ಉದ್ಯಮ ಸ್ನೇಹಿಯಾಗಿದೆ. ದೇಶವನ್ನು ಅತ್ಯುತ್ತಮ ಹೂಡಿಕೆಯ ತಾಣವನ್ನಾಗಿ ಮಾಡಲು ಭಾರತ ಸರ್ಕಾರವು ಮಾಡುತ್ತಿರುವ ಪ್ರಯತ್ನಗಳ ಲಾಭವನ್ನು ವಿಶ್ವದ ಪ್ರಮುಖ ಕಂಪನಿಗಳು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
Addressed @InvestIndia's Investors Summit on 'Opportunities & Partnerships in Pharma & Medical Devices'.
Spoke about our Govt's pro-industry reforms & efforts to make India the best investment destination in the world.
📽 https://t.co/ea1qVoFYs4 pic.twitter.com/jztCjzWAy0
— Dr Mansukh Mandaviya (@mansukhmandviya) October 27, 2021
ಇಂದು ಭಾರತವು ಜೆನೆರಿಕ್ ಔಷಧಿಗಳ ಅತಿದೊಡ್ಡ ತಯಾರಕ ಮತ್ತು ಪೂರೈಕೆದಾರ. ವಿಶ್ವಕ್ಕೆ ಕೈಗೆಟಕುವ ದರದಲ್ಲಿ ಔಷಧ ಸಿಗುವಂತೆ ಭಾರತ ನೋಡಿಕೊಳ್ಳುತ್ತಿದೆ ಎಂದು ಸಚಿವರು ಹೇಳಿದರು.
ಕೋವಿಡ್ -19 ರ ಮೊದಲ ಅಲೆಯು ಜಗತ್ತನ್ನು ಅಪ್ಪಳಿಸಿದಾಗ ಚಿಕಿತ್ಸೆ ನೀಡಲು ಯಾವುದೇ ಔಷಧಿ ಇರಲಿಲ್ಲ. ಆದರೆ ಇಂದು ಭಾರತವು ತನ್ನದೇ ಆದ ಔಷಧದ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಔಷಧಿಗಳನ್ನು ಪೂರೈಸಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.