ಬೆಂಗಳೂರು: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ತ್ಯಾಗರಾಜ ನಗರ ನಿವಾಸಿ ಭಾಗ್ಯಲಕ್ಷ್ಮಿ ಎಂಬವರು ತಮ್ಮ ಮನೆಯಲ್ಲಿ ಸುಮಾರು 10 ಸಾವಿರ ದಸರಾ ಗೊಂಬೆಗಳ ಅಲಂಕಾರ ಮಾಡಿದ್ದಾರೆ.
ಶತಮಾನಕ್ಕಿಂತಲೂ ಹಳೆಯ ಗೊಂಬೆಗಳನ್ನು ಸಹ ನಾವು ಅವರ ಮನೆಯಲ್ಲಿ ಕಾಣಬಹುದಾಗಿದೆ. ಈ ಬಾರಿ ಅವರು ವಿಶೇಷವಾಗಿ ಮಹಾಭಾರತದ ಹಲವು ಕಥೆಗಳನ್ನು ಹೇಳುವಂತೆ ಗೊಂಬೆಗಳನ್ನು ಕೂರಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಈ ಬಗ್ಗೆ ಭಾಗ್ಯಲಕ್ಷ್ಮಿ ಅವರು ಖಾಸಗಿ ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿದ್ದು, ಸಾಂಕ್ರಾಮಿಕ ಸೋಂಕು ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಗೊಂಬೆಗಳನ್ನು ಕೂರಿಸುವುದು ಸಾಧ್ಯವಾಗಿರಲಿಲ್ಲ. ಈ ಬಾರಿಯ ದಸರೆಗೆ ನಮಗೆ ಎರಡು ವರ್ಷ ಸಿದ್ಧತೆಗೆ ಸಮಯ ದೊರೆತಿದ್ದು, ಈ ಬಾರಿ 250 ವಿವಿಧ ಗೊಂಬೆಗಳನ್ನು ಸಹ ನಾವು ಪಡೆದಿದ್ದೇವೆ. ಗೊಂಬೆಗಳಿಗೆ ಅಲಂಕಾರ ಮಾಡಿದ್ದೇವೆ. ಈ ಬಾರಿ ಮಹಾಭಾರತವನ್ನು ಚಿತ್ರಿಸುವ ಥೀಮ್ ಜೊತೆಗೆ ನಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾವು ದೇಶದ ವಿವಿಧ ಭಾಗಗಳಿಂದ ಗೊಂಬೆಗಳನ್ನು ಪಡೆದಿದ್ದೇವೆ. ನಮ್ಮಲ್ಲಿ ಶತಮಾನಕ್ಕೆ ಹಳೆಯದಾದ ಬೊಂಬೆಗಳಿವೆ. ಸುಮಾರು 50 ಸಾವಿರ ಬೊಂಬೆಗಳನ್ನು ಹೊಂದಿದ್ದು, ಪ್ರತಿವರ್ಷ ಈ ಗೊಂಬೆ ಕೂರಿಸುವುದನ್ನು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.