ನವದೆಹಲಿ: ಕೇಂದ್ರ ಸರ್ಕಾರವು ಭಾರತದಲ್ಲಿ ಕ್ರಮವಾಗಿ ಮುಂಬೈ, ದೆಹಲಿ, ಗುವಾಹಟಿ ಮತ್ತು ಬೆಂಗಳೂರಿನಲ್ಲಿ ನಾಲ್ಕು ಹೆಲಿ-ಹಬ್ಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಅಪಘಾತ ಸಂತ್ರಸ್ಥರ ಸಕಾಲಿಕ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಹೆಲಿಪೋರ್ಟ್ಗಳನ್ನು ಮುಂಬೈ-ದೆಹಲಿ, ಅಂಬಾಲಾ-ಕೋಟ್ಪುಲಿ ಮತ್ತು ಅಂಬಾಲ-ಭಟಿಂಡ-ಜಾಮ್ನಗರ ಎಂಬ ಮೂರು ಎಕ್ಸ್ಪ್ರೆಸ್ವೇಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
“ನಾವು ಜುಹು-ಪುಣೆ-ಜುಹು, ಮಹಾಲಕ್ಷ್ಮಿ ರೇಸ್ ಕೋರ್ಸ್-ಪುಣೆ, ಗಾಂಧಿನಗರ-ಅಹಮದಾಬಾದ್-ಗಾಂಧಿನಗರ ನಡುವೆ 6 ರಿಂದ ಆರಂಭಗೊಂಡು ದೇಶಾದ್ಯಂತ ಹೆಲಿಕಾಪ್ಟರ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲು 10 ನಗರಗಳು ಮತ್ತು 82 ಮಾರ್ಗಗಳನ್ನು ಗುರುತಿಸಿದ್ದೇವೆ ” ಎಂದು ಸಿಂಧಿಯಾ ಹೇಳಿದ್ದಾರೆ.
“ಭಾರತದಲ್ಲಿ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳಿಗೆ ಉತ್ತೇಜನ ನೀಡಲು ಹೆಲಿಪೋರ್ಟ್ಗಳನ್ನು 3 ಎಕ್ಸ್ಪ್ರೆಸ್ವೇ (ದೆಹಲಿ-ಬಾಂಬೆ, ಅಂಬಾಲ-ಕೋಟ್ಪುಲಿ ಮತ್ತು ಅಂಬಾಲ-ಭಟಿಂಡ-ಜಾಮ್ನಗರ) ಜೊತೆಗೆ ಅಭಿವೃದ್ಧಿಪಡಿಸಲಾಗುವುದು. ಇದು ಅಪಘಾತ ಸಂತ್ರಸ್ತರಿಗೆ ಸಕಾಲಿಕ ಸ್ಥಳಾಂತರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.
ಹೆಲಿಕಾಪ್ಟರ್ ಉದ್ಯಮದಲ್ಲಿ ಸುಲಭದಲ್ಲಿ ವ್ಯಾಪಾರ ಮಾಡಲು ನಿಯಂತ್ರಣ ಮತ್ತು ನೀತಿ-ಸಂಬಂಧಿತ ನಿರ್ದೇಶನಗಳನ್ನು ಒದಗಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಮೀಸಲಾದ ಹೆಲಿಕಾಪ್ಟರ್ ವೇಗವರ್ಧಕ ಕೋಶವನ್ನು ಸ್ಥಾಪಿಸಲಾಗುವುದು ಎಂದು ಸಿಂಧಿಯಾ ಹೇಳಿದ್ದಾರೆ.
ಹೊಸ ನೀತಿಯ ಭಾಗವಾಗಿ, ಹೆಲಿಕಾಪ್ಟರ್ ಆಪರೇಟರ್ಗಳಿಗೆ ಪಾರ್ಕಿಂಗ್ ಠೇವಣಿ ಮತ್ತು ಲ್ಯಾಂಡಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಮೇಲಾಗಿ, ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದಿದ್ದಾರೆ.
ಹೆಲಿಕಾಪ್ಟರ್ ಉದ್ಯಮದ ವ್ಯವಹಾರವನ್ನು ಸುಲಭಗೊಳಿಸಲು ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸುತ್ತದೆ ಎಂದು ಸಿಂಧಿಯಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.