ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 209 ರ ಕನಕಪುರ ರಸ್ತೆಯಿಂದ ಮಳವಳ್ಳಿ ವರೆಗೆ ಚತುಷ್ಪಥ ಮತ್ತು ಬೈಪಾಸ್ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕಾಮಗಾರಿ 2022 ರ ಜೂನ್ ವೇಳೆಗೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ರಸ್ತೆ ಕಾಮಗಾರಿ ಗುತ್ತಿಗೆಯನ್ನು ಸದ್ಬವ್ ಬೆಂಗಳೂರು ಹೈವೇ ಪ್ರೈ. ಲಿ. ವಹಿಸಿಕೊಂಡಿದ್ದು, ಕಂಪೆನಿಯ ಆರ್ಥಿಕ ಸಮಸ್ಯೆ ಮತ್ತು ಮೂಲಭೂತ ಸೌಲಭ್ಯಗಳ ಸ್ಥಳಾಂತರ ವಿಳಂಬದಿಂದ ಅನುಷ್ಠಾನ ಕಾಮಗಾರಿ ವಿಳಂಬವಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗಾ ವಹಿಸಿದೆ. ಹಣದ ಹರಿವಿನ ಬಗೆಗೂ ಇದು ಕ್ರಮ ವಹಿಸುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಈ ರಸ್ತೆ ಬಿಆರ್ಟಿ ಹುಲಿ ಮೀಸಲು ಗಡಿಯಿಂದ ಬೆಂಗಳೂರು ವರೆಗೆ 170.92 ಕಿಮೀ ಉದ್ದವಿದೆ. ಕಾಮಗಾರಿ ಗುತ್ತಿಗೆ ತೆಗೆದುಕೊಂಡ ಸಂಸ್ಥೆಯು 2017 ರ ಆಗಸ್ಟ್ 21 ರಿಂದ ಕಾಮಗಾರಿ ಆರಂಭ ಮಾಡಿದೆ. 79% ಪ್ರಗತಿಯಾಗಿರುವ ಬಗೆಗೂ ಗಡ್ಕರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.