ನವದೆಹಲಿ: ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಆರ್. ಕೆ. ಸಿಂಗ್ ‘ಸ್ವತಂತ್ರ ಇಂಜಿನಿಯರ್’(ಐಇ) ಮೂಲಕ ‘ವಿವಾದ ತಪ್ಪಿಸುವ ಕಾರ್ಯತಂತ್ರ’ಕ್ಕೆ ಅನುಮೋದನೆ ನೀಡಿದ್ದಾರೆ.
ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಸಿಪಿಎಸ್ಇಗಳ ನಿರ್ಮಾಣ ಗುತ್ತಿಗೆಗಳಲ್ಲಿ ಇದನ್ನು ಪಾಲಿಸಲಾಗುವುದು. ಇದರಡಿ ‘ಸ್ವತಂತ್ರ ಇಂಜಿನಿಯರ್’ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅದರಡಿ ಸ್ವತಂತ್ರ, ಮೂರನೇ ವ್ಯಕ್ತಿ ಮತ್ತು ಪ್ರಮುಖ ಯೋಜನೆಗಳಲ್ಲಿ, ಮೂಲಸೌಕರ್ಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯತಂತ್ರವನ್ನು ಬಳಕೆ ಮಾಡಲಾಗುತ್ತಿದ್ದು, ವಿಶೇಷ ಜ್ಞಾನವನ್ನು ಹೊಂದಿರುವ ಜತೆಗೆ ವಾಣಿಜ್ಯ ಹಾಗೂ ಕಾನೂನುಗಳನ್ನು ತಿಳಿದಿರುವ ಸ್ವತಂತ್ರ ಇಂಜಿನಿಯರ್ ಗಳನ್ನು ನಿರ್ದಿಷ್ಟ ಯೋಜನೆಗಳಿಗಾಗಿ ನೇಮಿಸಿಕೊಳ್ಳಲಾಗುವುದು.
ಈ ಯೋಜನೆಯ ಬಗ್ಗೆ ನಿರಂತರ ನಿಗಾವಹಿಸುವರು ಮತ್ತು ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗೆ ಮುಕ್ತ ಸಂವಹನ ನಡೆಸುವುದರಿಂದ ಪರಿಣಾಮಕಾರಿ ಪಾತ್ರವಹಿಸಿ, ವಿವಾದಗಳು ಉಂಟಾಗುವುದನ್ನು ತಪ್ಪಿಸಲಿದ್ದಾರೆ. ಈ ಕಾರ್ಯತಂತ್ರ ಆರಂಭಿಕ ಭಿನ್ನಾಭಿಪ್ರಾಯಗಳನ್ನು ತಗ್ಗಿಸಿ, ಅವು ಪೂರ್ಣ ಪ್ರಮಾಣದ ವ್ಯಾಜ್ಯಗಳಾಗುವುದನ್ನು ತಡೆಯುತ್ತದೆ. ನ್ಯಾಯಯುತ ಮತ್ತು ಸರಳ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಪರಿಹರಿಸಲು ಸಾಧ್ಯವಾಗಲಿದೆ. ಇದು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಖಾತ್ರಿಪಡಿಸುವ ಜತೆಗೆ ಸಮಯ ಹಾಗೂ ವೆಚ್ಚವನ್ನು ಉಳಿತಾಯ ಮಾಡಲಿದೆ.
ಹಾಲಿ ಜಲವಿದ್ಯುತ್ ಘಟಕಗಳ ವಲಯದಲ್ಲಿ ಇರುವ ವಿವಾದ ಇತ್ಯರ್ಥ ಕಾರ್ಯತಂತ್ರ ಉದ್ಯೋಗಿಗಳು ಮತ್ತು ಗುತ್ತಿಗೆದಾರರ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಲು ಸೂಕ್ತ ನೀತಿ ಚೌಕಟ್ಟನ್ನು ಹೊಂದಿಲ್ಲ ಮತ್ತು ಕೇವಲ ವಿವಾದ ಆರಂಭವಾದ ನಂತರ ಮತ್ತು ಅವುಗಳನ್ನು ಎರಡು ಪಾಲುದಾರರ ನಡುವೆ ಗುರುತಿಸಿದ ನಂತರವಷ್ಟೇ ಪರಿಹರಿಸಲು ಸಾಧ್ಯವಿದೆ ಎಂದು ಹೈಡ್ರೋ ಘಟಕಗಳ ನಿರ್ಮಾಣದಲ್ಲಿ ತೊಡಗಿರುವ ಸಿಪಿಎಸ್ಇಗಳು ತೀವ್ರ ಆತಂಕ ವ್ಯಕ್ತಪಡಿಸಿದವು. ಕ್ಷೇತ್ರ ಮಟ್ಟದಲ್ಲಿನ ಸಮಸ್ಯೆಗಳು ಮತ್ತು ಇಂತಹ ವಿಷಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಮಂಡಳಿ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ಸಲ್ಲಿಸಿದ್ದ ವರದಿಯ ಕುರಿತು ಸಚಿವಾಲಯದಲ್ಲಿ ವ್ಯಾಪಕ ಚರ್ಚೆ ನಡೆಯಿತು. ಆ ವೇಳೆ ಜಲವಿದ್ಯುತ್ ಘಟಕಗಳನ್ನು ಅನುಷ್ಠಾನಗೊಳಿಸುತ್ತಿರುವ ಸಿಇಎ ಮತ್ತು ಮಂಡಳಿ ಅಧಿಕಾರಿಗಳೂ ಸಹ ಭಾಗವಹಿಸಿದ್ದರು.
ಸಮಿತಿ ಗುತ್ತಿಗೆಗಳ ಜಾರಿ ವೇಳೆ ಹಕ್ಕುಗಳು ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಭಾರೀ ಪ್ರಮಾಣದ ಹಣಕಾಸು ನಷ್ಟವಾಗುವ ಜತೆಗೆ ಸಮಯ ಮತ್ತು ವೆಚ್ಚವೂ ಅಧಿಕವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಆರಂಭಿಕ ಹಂತದಲ್ಲೇ ಗುತ್ತಿಗೆಗಳಿಗೆ ನ್ಯಾಯಯುತ ಮತ್ತು ಸರಳ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕಾರ್ಯತಂತ್ರ ಅತ್ಯಗತ್ಯವಾಗಿದ್ದು, ಇದು ಗುತ್ತಿಗೆಗಳ ಸಾಧನೆ ಯಶಸ್ಸಿಗೆ ಪ್ರಮುಖ ಮಾನದಂಡವಾಗಲಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಬಜೆಟ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ ಮತ್ತು ಸಮಯ ಹಾಗೂ ವೆಚ್ಚ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ ಎಂದು ಹೇಳಿತು. ‘ಸ್ವತಂತ್ರ ಇಂಜಿನಿಯರ್’(ಐಇ) ಮೂಲಕ ವಿವಾದ ತಪ್ಪಿಸುವ ಕಾರ್ಯತಂತ್ರ ನಿಯಮಾವಳಿ ಮಾದರಿಯ ಪ್ರಮುಖಾಂಶಗಳನ್ನು ಸಹ ಪ್ರಕಟಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.