ಬೆಂಗಳೂರು: ವಿಶ್ವ ಹೃದಯ ದಿನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.
ಅವರು ವಿಧಾನಸೌಧದಿಂದ ಕಂಠೀರವ ಸ್ಟೇಡಿಯಂವರೆಗೆ ನಡೆದ ಹೃದಯದಿಂದ ಬಾಂಧವ್ಯ ಬೆಸೆಯೋಣ ಎಂಬ ಧ್ಯೇಯವಾಕ್ಯದ ವಾಕಥಾನ್ಗೆ ಚಾಲನೆ ನೀಡಿ ಮಾತನಾಡಿದರು.
ಸದೃಢ ದೇಹ, ಆರೋಗ್ಯಕರ ಮನಸ್ಸು ಆರೋಗ್ಯಪೂರ್ಣ ಹೃದಯಕ್ಕೆ ನಾಂದಿ. ಆ ಮೂಲಕ ದೇಹದ ಎಲ್ಲಾ ಅಂಗಾಗಗಳು ಆರೋಗ್ಯಪೂರ್ಣವಾಗಲಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡಲು ಹೃದಯ ಸಹಕಾರಿ ಎಂದು ಅವರು ತಿಳಿಸಿದ್ದಾರೆ.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಅರಿವು ಎಲ್ಲರಿಗೂ ಬೇಕು. ಮಾನವನ ದೇಹದಲ್ಲಿ ಹೃದಯ ಕೇಂದ್ರಬಿಂದು. ಮಾವನವನ ದೇಹದ ಎಲ್ಲಾ ಚಲನವಲನಗಳು ಹೃದಯವನ್ನು ಅವಲಂಬಿಸಿದೆ. ಹೃದಯವನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸುವಂತೆ ಅವರು ಮನವಿ ಮಾಡಿದ್ದಾರೆ. ಹೃದಯದ ಬಗ್ಗೆ ಎಲ್ಲರೂ ಕಾಳಜಿ ವಹಿಸುವಂತೆ ಅವರು ತಿಳಿಸಿದ್ದಾರೆ.
"ಸದೃಢ ದೇಹ, ಆರೋಗ್ಯಕರ ಮನಸ್ಸು, ಆರೋಗ್ಯಪೂರ್ಣ ಹೃದಯಕ್ಕೆ ನಾಂದಿ, ಆಮೂಲಕ ದೇಹದ ಎಲ್ಲಾ ಅಂಗಾಂಗಗಳೂ ಅರೋಗ್ಯಪೂರ್ಣವಾಗಲಿದೆ" – ವಿಶ್ವ ಹೃದಯ ದಿನದಂದು ಮಾನ್ಯ ಮುಖ್ಯಮಂತ್ರಿ @BSBommai ರವರ ಸಂದೇಶ.#WorldHeartDay #ಹೃದಯದಿಂದ_ಬಾಂಧವ್ಯ_ಬೆಳೆಸೋಣ pic.twitter.com/FG3LjwmmAs
— CM of Karnataka (@CMofKarnataka) September 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.