ಮೈಸೂರು: ಸಾರ್ವಜನಿಕ ಸಾರಿಗೆ ಸಮಸ್ಯೆ, ವಿಕಲಾಂಗತೆ, ಆರ್ಥಿಕ ಸಮಸ್ಯೆಗಳಂಚಹ ಅಡೆತಡೆಗಳನ್ನು ಮೀರಿ ಮೈಸೂರು ವಿಶ್ವವಿದ್ಯಾಲಯದ ಈ ಮೂವರು ಹುಡುಗಿಯರು ವಿವಿತ 101 ನೇ ಘಟಿಕೋತ್ಸವದಲ್ಲಿ 31 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.
ಎಂಎಸ್ಸಾ ರಸಾಯನಶಾಸ್ತ್ರ ಪದವಿಯ ವಿದ್ಯಾರ್ಥಿನಿ ಚೈತ್ರಾ ನಾರಾಯಣ್ ಹೆಗ್ಡೆ, ಎಂ.ಎ. ಪದವೀಧರರಾದ ಮಾದಲಾಂಬಿಕೆ ಟಿ.ಎಸ್. ಮತ್ತು ಲತಾ ಎಚ್. ಎನ್. ಅವರು ತಮ್ಮ ಶಿಕ್ಷಣದ ಸಂದರ್ಭದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಈ ಸಾಧನೆಯನ್ನು ಮೆರೆದಿದ್ದಾರೆ.
ಸಾರ್ವಜನಿಕ ಸಾರಿಗೆ ಮತ್ತು ಉತ್ತಮ ಶಿಕ್ಷಣಕ್ಕೆ ಅನುಕೂಲ ಒದಗಿಸುವ ಶಾಲೆಗಳಿರದ ಉತ್ತರ ಕನ್ನಡದ ಕುಗ್ರಾಮವೊಂದರ ಚೈತ್ರ, ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಮೈಸೂರು ವಿವಿಗೆ ಬಂದವರು. ಇದೀಗ 20 ಚಿನ್ನದ ಪದಕಗಳು, ನಾಲ್ಕು ನಗದು ಬಹುಮಾನಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಸಾಧನೆ ಮೆರೆದಿದ್ದಾರೆ.
ಹಾಗೆಯೇ ಚಾಮರಾಜನಗರದ ಮಾದಲಾಂಬಿಕೆ ಅವರು ತಮ್ಮ ಆರ್ಥಿಕ ಸ್ಥಿತಿಗತಿ ಸರಿಯಾಗಿರದಿದ್ದರೂ, ವೈಯಕ್ತಿಕ ಕಷ್ಟ ನಷ್ಟಗಳ ನಡುವೆಯೂ ಕನ್ನಡ ಎಂ.ಎ. ಯಲ್ಲಿ 10 ಚಿನ್ನದ ಪದಕಗಳು ಮತ್ತು ನಾಲ್ಕು ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ದೃಷ್ಟಿ ವಿಕಲಚೇತನರಾದ ಲತಾ ಅವರು ಬ್ರೈಲ್ ಲಿಪಿ ಮತ್ತು ಲಿಪಿಕಾರರಿಗೆ ಪ್ರವೇಶ ಪಡೆಯುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದರೂ, ಎಂ.ಎ. ಕನ್ನಡದಲ್ಲಿ ಒಂದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರು ಪಿರಿಯಾಪಟ್ಟಣದವರಾಗಿದ್ದು, ಸ್ಕಾಲರ್ಶಿಪ್ ಮೂಲಕವೇ ತಮ್ಮ ಈ ಕೋರ್ಸ್ ಅನ್ನು ಸಂಪೂರ್ಣಗೊಳಿಸಿದವರಾಗಿದ್ದಾರೆ.
ಈ ಮೂವರೂ ವಿದ್ಯಾರ್ಥಿಗಳು ರೈತ ಕುಟುಂಬದಿಂದ ಬಂದವರಾಗಿದ್ದು, ಗ್ರಾಮೀಣ ಭಾಗದಿಂದ ಬಂದವರಾಗಿದ್ದಾರೆ. ಹಲವಾರು ಸಮಸ್ಯೆಗಳನ್ನು ಎದುರಿಸಿ ಇದೀಗ ತಮ್ಮ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.