ಗುಜರಾತ್: ತಾಲಿಬಾನ್ ಕೈವಶವಾಗಿರುವ ಆಫ್ಘಾನಿಸ್ಥಾನಅಫ್ಘಾನಿಸ್ತಾನದಿಂದ 120 ಮಂದಿ ಭಾರತೀಯ ಪ್ರಜೆಗಳನ್ನು ಕರೆತಂದ ಐಎಎಫ್ ವಿಮಾನ ಗುಜರಾತ್ನ ಜಾಮ್ನಗರಕ್ಕೆ ಬಂದಿಳಿದಿದೆ.
ಭಾರತೀಯ ವಾಯುಪಡೆಯ ಸಿ – 17 ವಿಮಾನವು 120 ಮಂದಿ ರಾಜತಾಂತ್ರಿಕರನ್ನು ಭಾರತಕ್ಕೆ ಸುರಕ್ಷಿತವಾಗಿ ಮರಳಿಸಿದ್ದು, ಅವರನ್ನು ಸಚಿವ ಧರ್ಮೇಂದ್ರ ಸಿಂಗ್ ಜಡೇಜಾ, ಮೇಯರ್ ಬಿನಾಬೆನ್ ಕೊಠಾರಿ ಅವರು ಸ್ವಾಗತಿಸಿದರು. ಈ ವಿಮಾನ ಗುಜರಾತ್ನ ಜಾಮ್ನಗರದ ವಾಯುನೆಲೆಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲಾಯಿತು.
ಈ ವಿಮಾನದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಕೆಲ ಭಾರತೀಯ ಪ್ರಜೆಗಳು ಬಂದಿಳಿದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪ್ರಧಾನಿ ಮೋದಿ ಅವರು ಸಹಕಾರ ನೀಡಿದ್ದಾರೆ ಎಂದು ಗುಜರಾತ್ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.