ನವದೆಹಲಿ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತ ಗ್ರಾಮ ಖುಲ್ನಾದಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ವಿಶ್ವಹಿಂದೂ ಪರಿಷತ್ ಭಾನುವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವಸಂಸ್ಥೆಯ ಹೈಕಮಿಷನರ್ ಮಿಷೆಲ್ ಬಾಚೆಲೆಟ್, ಯುರೋಪಿನ ಯೂನಿಯನ್ ಮುಖ್ಯಸ್ಥರಿಗೆ ಪತ್ರವನ್ನು ಬರೆದಿದೆ.
VHP joint gen sec. Pujya Swami Vigyananand today sent letters to @antonioguterres @mbachelet
and @vonderleyen for Hindu minority village and temples vandalized, property, cows looted by radical Islamists (Jihadists) in Khulna distt of Bangladesh yesterday. pic.twitter.com/bCc3EdrVhg— Vishva Hindu Parishad -VHP (@VHPDigital) August 8, 2021
ವರದಿಗಳ ಪ್ರಕಾರ ರುಪ್ಶ ಉಪಜಝಿಲದ ಶಿಲೈ ಗ್ರಾಮದಲ್ಲಿ ಹಿಂದೂ ದೇಗುಲಗಳ ಮೇಲೆ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ ಧ್ವಂಸ ಪಡಿಸಲಾಗಿದೆ.
ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ವಿಶ್ವಹಿಂದೂ ಪರಿಷತ್ ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಗೆ ಮನವಿ ಮಾಡಿದೆ.
Hundreds of Islamic extremists attacked Shiali and Gowara villages in Rupsha upazila of Khulna district yesterday.All the temples and 58 Hindu houses in the area have been vandalized .Police haven’t taken any action yet. Even no media in Bangladesh has published this incident. pic.twitter.com/c0a7KF27ZH
— Bangladesh Hindu Unity Council (@UnityCouncilBD) August 8, 2021
ವಿಶ್ವ ಹಿಂದೂ ಪರಿಷತ್ ಪ್ರಕಾರ, ಶನಿವಾರ ರಾತ್ರಿ 3 ರಿಂದ ಐದು ಗಂಟೆಯ ನಡುವೆ ಮುಸ್ಲಿಂ ಮೂಲಭೂತವಾದಿಗಳು ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. 10 ದೇಗುಲಗಳನ್ನು, 57 ಮನೆಗಳನ್ನು ಧ್ವಂಸ ಮಾಡಲಾಗಿದೆ. ದಾಳಿಕೋರರು ಗೋವುಗಳು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಂಗ್ಲಾ ಸರ್ಕಾರ ಕಠಿಣ ಕ್ರಮವನ್ನು ಕೈ ಗೊಳ್ಳುವಂತೆ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಮನವಿ ಮಾಡಿದೆ. ಅಲ್ಲದೇ ಗ್ರಾಮದ ಹಿಂದೂಗಳಿಗೆ ರಕ್ಷಣೆಯನ್ನು ಒದಗಿಸುವಂತೆ ಮನವಿಯನ್ನು ಮಾಡಿದೆ. ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ, ಹಿಂದುಗಳ ಆಸ್ತಿಯನ್ನು ಮೂಲಭೂತವಾದಿಗಳು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಕೂಡ ಆರೋಪಿಸಿದೆ.
ಬಾಂಗ್ಲಾದೇಶದ ಪೊಲೀಸ್ ಮಾಹಿತಿಯ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.