ಪೋಲೆಂಡ್: ದೇಶದ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಗೋಡೆಗಳ ಮೇಲೆ ಉಪನಿಷತ್ತು ಬರಹಗಳನ್ನು ಕೆತ್ತನೆ ಮಾಡಲಾಗಿದೆ.
ಈ ಚಿತ್ರಗಳನ್ನು ಪೋಲೆಂಡ್ನ ಭಾರತೀಯ ರಾಯಭಾರ ಕಚೇರಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಭಾರತೀಯರ ಮನಸ್ಸು ಆಹ್ಲಾದಗೊಳಿಸುವ ದೃಶ್ಯ ಎಂದು ಬರೆದುಕೊಂಡಿದೆ.
ವಾರ್ಸಾ ವಿವಿಯ ಗ್ರಂಥಾಲಯದ ಗೋಡೆಗಳಲ್ಲಿ ಉಪನಿಷತ್ ಬರಹಗಳನ್ನು ಕೆತ್ತಲಾಗಿದೆ. ಈ ದೃಶ್ಯಗಳು ಹಿಂದೂ ಧರ್ಮದ ಸಂಸ್ಕೃತಿಯನ್ನು ರೂಪಿಸುವ ಹಿಂದೂ ತತ್ವಶಾಸ್ತ್ರದ ವೈದಿಕ ಸಂಸ್ಕೃತದ ಪಠ್ಯಗಳಾಗಿವೆ ಎಂದು ಈ ಚಿತ್ರಕ್ಕೆ ತಲೆಬರಹ ನೀಡಲಾಗಿದೆ. ವಿಶ್ವವಿದ್ಯಾಲಯದ ಈ ನಡೆಗೆ ಅನೇಕ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಟ್ವೀಟ್ ಅನ್ನು ಯೋಗ ಗುರು ಬಾಬಾ ರಾಮ್ದೇವ್ ಅವರು ರಿಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
What a pleasant sight !!😇 This is a wall of Warsaw University's library with Upanishads engraved on it. Upanishads are late vedic Sanskrit texts of Hindu philosophy which form the foundations of Hinduism. 🙏🙏@MEAIndia pic.twitter.com/4fWLlBUAdX
— India in Poland (@IndiainPoland) July 9, 2021
ವೇದಗಳ ಕೊನೆಯ ಹಾಗೂ ನಾಲ್ಕನೇ ಭಾಗವನ್ನು ಉಪನಿಷತ್ ಎಂದು ಹೇಳಲಾಗುತ್ತದೆ. ಇದು ಗುರು – ಶಿಷ್ಯರ ನಡುವಿನ ಸಂಭಾಷಣೆಯ ರೂಪದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.