ನವದೆಹಲಿ: ಕೊರೋನಾ ಸಂಕಷ್ಟದ ಅವಧಿಯಲ್ಲಿ ಹಲವು ನೆರೆಯ ರಾಷ್ಟ್ರಗಳಿಗೆ ಭಾರತ ನೆರವಿನ ಹಸ್ತ ಚಾಚಿತ್ತು. ಈ ಸಹಕಾರ ಮನೋಭಾವವನ್ನು ಮುಂದುವರೆಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡೋನೇಷ್ಯಾಗೂ ವೈದ್ಯಕೀಯ ನೆರವನ್ನು ಒದಗಿಸಿದೆ.
ಭಾರತೀಯ ನೌಕಾಪಡೆ ಶನಿವಾರ ನೌಕೆಗಳ ಮೂಲಕ 300 ಆಮ್ಲಜನಕ ಸಾಂಧ್ರಕಗಳು ಮತ್ತು 100 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಇಂಡೋನೇಷ್ಯಾ ರಾಜಧಾನಿ ಜಕಾರ್ತಾಗೆ ತಲುಪಿಸುವ ಮೂಲಕ ನೆರವಾಗಿದೆ.
ಕೊರೋನಾ ರೂಪಾಂತರ ಡೆಲ್ಟಾ ಗೆ ಇಂಡೋನೇಷ್ಯಾ ಅಕ್ಷರಶಃ ತತ್ತರಿಸಿದ್ದು, ಈ ನಿಟ್ಟಿನಲ್ಲಿ ವೈದ್ಯಕೀಯ ಅನುಕೂಲಕ್ಕಾಗಿ ಭಾರತದಿಂದ ಈ ನೆರವನ್ನು ರವಾನಿಸಲಾಗಿದೆ.
ಕೊರೋನಾ ಎರಡನೇ ಅಲೆಯ ಭೀಕರತೆಗೆ ಭಾರತ ಸಿಲುಕಿದ್ದ ಸಂದರ್ಭದಲ್ಲಿ ಇಂಡೋನೇಷ್ಯಾ ಭಾರತಕ್ಕೆ 1400 ಆಮ್ಲಜನಕ ಸಾಂಧ್ರಕಗಳನ್ನು ಒದಗಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.