ನವದೆಹಲಿ: ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ, ಮತದಾರರು ಈ ವಿಷಯವನ್ನು ರಾಜಕೀಯಗೊಳಿಸುವವರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ಥಾನದಿಂದ ಬಂದಿರುವ ಮುಸ್ಲಿಮೇತರರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲು ಸಿಎಎ ಯನ್ನು ಅಂಗೀಕರಿಸಲಾಗಿದೆ. ವಿರೋಧಿಗಳು ಇದನ್ನು ತಾರತಮ್ಯ, ಕಾನೂನು ಬಾಹಿರ, ಅಸಾಂವಿಧಾನಿಕ ಎಂದು ವಾದಿಸುತ್ತಿದ್ದಾರೆ, ಆದರೆ ಇದು ದೇಶವನ್ನು ನಂಬಿಕೆಯಡಿ ಜೋಡಿಸುವ ಕೆಲಸವನ್ನು ಮಾಡಲಿದೆ ಎಂದು ಭಾಗವತ್ ಅಭಿಪ್ರಾಯಿಸಿದ್ದಾರೆ.
ಸಿಎಎ ಬಾಂಗ್ಲಾ ದೇಶದಿಂದ ಅಸ್ಸಾಂಗೆ ಅಕ್ರಮವಾಗಿ ಬಂದ ವಲಸಿಗರಲ್ಲಿ ಭಯವನ್ನು ಹುಟ್ಟುಹಾಕಿತು. ವಿರೋಧಿಗಳು ಸಿಎಎ ಹೆಸರಿನಲ್ಲಿ ಪ್ರತಿಭಟನೆ ಆರಂಭಿಸಿದರು. ದಾಖಲೆಗಳಿಲ್ಲದೆ ಅಕ್ರಮವಾಗಿ ಅಸ್ಸಾಂನಲ್ಲಿ ನೆಲೆಸಿರುವ ವಲಸಿಗರನ್ನು ಎನ್ಆರ್ಸಿಯಿಂದ ಹೊರಗಿಡಲಾಗಿದೆ ಎಂದು ಭಾಗವತ್ ಹೇಳಿದರು.
ಸಿಎಎ ಮತ್ತು ಎನ್ಆರ್ಸಿ ಭಾರತೀಯ ನಾಗರಿಕರ ಪರವಾಗಿದೆಯೇ ಹೊರತು ವಿರುದ್ಧವಾಗಿಲ್ಲ. ನೆಹರು – ಲಿಖಾಯತ್ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ಥಾನ ತನ್ನ ದೇಶದ ಅಲ್ಪಸಂಖ್ಯಾತರನ್ನು ರಕ್ಷಿಸಬೇಕು. ಭಾರತ ಈ ಕೆಲಸವನ್ನು ಮಾಡುತ್ತಿದೆ. ಆದರೆ ಪಾಕಿಸ್ಥಾನ ಇದರಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.
ಭಾರತೀಯರು ಯಾವಾಗಲೂ ಹೊರಗಿನಿಂದ ದೇಶಕ್ಕೆ ಬಂದವರನ್ನು ಸ್ವಾಗತಿಸುತ್ತಾರೆ. ಆದರೆ ಕೆಲವರು ತಮ್ಮ ಭಾಷೆ, ಧರ್ಮ, ಆಹಾರ ಪದ್ಧತಿಯನ್ನು ಇತರರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ರಾಷ್ಟ್ರವನ್ನು ನಿಧಾನವಾಗಿ ಪಾಕಿಸ್ಥಾನ ಮಾಡುವ ಹುನ್ನಾರವೂ ನಡೆಯುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ಸಂವಿಧಾನ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಜನರು ಎಲ್ಲ ರೀತಿಯ ಹಕ್ಕುಗಳನ್ನು ಬಯಸಿದಾಗ, ಆದರೆ ಕರ್ತವ್ಯಗಳನ್ನು ಮರೆತಾಗ ಸಮಸ್ಯೆ ಉದ್ಭವಿಸುತ್ತದೆ. ಎನ್ಆರ್ಸಿ, ಸಿಎಎ ವಿಚಾರದಲ್ಲಿಯೂ ಕೋಮು ಬಣ್ಣ ಹಚ್ಚಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ವಿರೋಧಿಗಳಿಂದಾಗುತ್ತಿದೆ ಎಂದು ಅವರು ಹೇಳಿದರು.
ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶಗಳಲ್ಲಿನ ಅಲ್ಪಸಂಖ್ಯಾತರ ದುಃಸ್ಥಿತಿಯ ನಿರ್ಲಕ್ಷ್ಯ ಅಸಾಧ್ಯ. ಸಿಎಎ ಈ ದೇಶಗಳಲ್ಲಿ ಕಿರುಕುಳಕ್ಕೊಳಗಾಗಿ ಭಾರತದಲ್ಲಿ ಆಶ್ರಯ ಬಯಸುವವರಿಗೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಾನೂನು ಬಾಹಿರವಾಗಿ ದೇಶದೊಳಗೆ ಅಕ್ರಮವಾಗಿ ಬದುಕುವವರ ವಿರುದ್ಧ ಕಣ್ಣಿಡುವುದು ಸರ್ಕಾರದ ಕರ್ತವ್ಯ. ಈ ಕೆಲಸವನ್ನು ಎನ್ಆರ್ಸಿ ಮಾಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.