ನವದೆಹಲಿ: ಮೌಖಿಕ ವೇದ ಕಲಿಕೆಯ ಹಿನ್ನೆಲೆಯಲ್ಲಿ ವೇದ ಕಲಿಕೆಗೆ ಪೂರಕವಾಗಿ ಎರಡು ಸ್ಕೂಲ್ ಬೋರ್ಡ್ಗಳನ್ನು ಯೋಜಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿದ್ದಾರೆ.
ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ (ಎಂಎಸ್ಆರ್ವಿವಿಪಿ) ಉಜ್ಜಯಿನಿ ಯಿಂದ ಪರಿಗಣಿಸಲ್ಪಟ್ಟ ಆಧುನಿಕ ವಿಷಯಗಳ ಜೊತೆಗೆ ಈ ಅಧ್ಯಯನ ವಿಚಾರವನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಯತ್ತ ಸಂಸ್ಥೆಯಿಂದ ವೈದಿಕ ಅಧ್ಯಯನದ ಹಿನ್ನೆಲೆಯಲ್ಲಿ ಒಂದು ಖಾಸಗಿ ಮಂಡಳಿಗೂ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಂಡಳಿಗಳು ಸಿಬಿಎಸ್ಇ ಮತ್ತು ಎನ್ಐಒಎಸ್ಗಳಡಿಯಲ್ಲಿ ಕಾರ್ಯ ನಿರ್ವಹಿಸಲಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಇತರ ಶಿಕ್ಷಣ ವಿಚಾರಗಳಾದ ಆನ್ಲೈನ್ ಕಲಿಕೆ, ಸ್ವಯಂಪ್ರಭಾ, ಎನ್ಡಿಎಲ್, ವರ್ಚುವಲ್ ಲ್ಯಾಬ್ ಸೇರಿದಂತೆ ಇನ್ನಿತರ ಶಿಕ್ಷಣಕ್ಕೆ ಪೂರಕವಾದ ಅಂಶಗಳ ಬಗೆಗಿನ ಪ್ರಶ್ನೆಗೂ ಅವರು ಸಂಸತ್ತಿನಲ್ಲಿ ಉತ್ತರಿಸಿದ್ದಾರೆ. ವೃತ್ತಿಪರ ಅಧ್ಯಯನದ ಹಿನ್ನೆಲೆಯಲ್ಲಿ 15 ನೇ ಹಣಕಾಸು ಆಯೋಗ 6,143 ಕೋಟಿ ರೂ. ಅನುದಾನಕ್ಕೆ ಶಿಫಾರಸು ಮಾಡಿರುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.