ಭೂತಾನ್ : ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಭೂತಾನ್ನ ಹಣಕಾಸು ಸಚಿವರಾದ ಲಿಯಾನ್ಪೊ ನಮ್ಗೆ ತ್ಸೆರಿಂಗ್ ಅವರು ಜಂಟಿಯಾಗಿ ಭೂತಾನ್ನಲ್ಲಿ ಭೀಮ್-ಯುಪಿಐ ಅನ್ನು ವರ್ಚುವಲ್ ಸಮಾರಂಭದಲ್ಲಿ ಪ್ರಾರಂಭಿಸಿದರು.
ಭಾರತದ ನೆರೆಹೊರೆಯ ಮೊದಲ ನೀತಿಯಡಿಯಲ್ಲಿ ಭೂತಾನ್ನಲ್ಲಿ ಸೇವೆಗಳು ಪ್ರಾರಂಭವಾಗಿವೆ ಮತ್ತು ನಮ್ಮ ಸಾಧನೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಮತ್ತು ಅದನ್ನು ನಮ್ಮ ಅಮೂಲ್ಯವಾದ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ. ಕಳೆದ 5 ವರ್ಷಗಳಲ್ಲಿ 100 ದಶಲಕ್ಷಕ್ಕಿಂತಲೂ ಹೆಚ್ಚು ಯುಪಿಐ ಕ್ಯೂ ಆರ್ಗಳನ್ನು ಹೊಂದಿರುವ ಭೀಮ್ ಯುಪಿಐ ಡಿಜಿಟಲ್ ವಹಿವಾಟಿನ ಪ್ರಮುಖವಾದ ಭಾಗವಾಗಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇದೊಂದು ಸಾಧನೆಯಾಗಿದೆ, 41 ಲಕ್ಷ ಕೋಟಿ ಮೌಲ್ಯದ 22 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಭೂತಾನ್ನಲ್ಲಿ ಭೀಮ್-ಯುಪಿಐ ಸೇವೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಭೂತಾನ್ನ ಹಣಕಾಸು ಸಚಿವ ಲಿಯಾನ್ಪೊ ನಮ್ಗೆ ತ್ಸೆರಿಂಗ್ ಧನ್ಯವಾದ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ದಿನಗಳು ಕಳೆದಂತೆ ಉಭಯ ದೇಶಗಳ ನಡುವಿನ ಬಾಂಧವ್ಯವು ಬಲಗೊಳ್ಳುತ್ತಿದೆ ಎಂದು ಹೇಳಿದರು.
ಈ ಚಾಲನೆಯು 2019 ರಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಭೂತಾನ್ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಮಾಡಿದ ಒಡಂಬಡಿಕೆಯನ್ನು ಪೂರೈಸುತ್ತದೆ. ಭೇಟಿಯ ನಂತರ, ಭಾರತ ಮತ್ತು ಭೂತಾನ್ ಈಗಾಗಲೇ ಪರಸ್ಪರ ದೇಶಗಳಲ್ಲಿ ರೂಪೇ ಕಾರ್ಡ್ಗಳನ್ನು ಸ್ವೀಕರಿಸುವಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ಎರಡು ಹಂತಗಳಲ್ಲಿ ಸಕ್ರಿಯಗೊಳಿಸಿದೆ – ಮೊದಲ ಹಂತದಲ್ಲಿ ಭೂತಾನ್ ಮೂಲದ ಟರ್ಮಿನಲ್ ಗಳಲ್ಲಿ ಭಾರತದಲ್ಲಿ ನೀಡಲಾಗುವ ರೂಪೆ ಕಾರ್ಡ್ಗಳ ಸ್ವೀಕಾರ, ಮತ್ತು ಎರಡನೇ ಹಂತದಲ್ಲಿ ಭೂತಾನಿನಲ್ಲಿ ನೀಡಲಾಗುವ ರೂಪೆ ಕಾರ್ಡ್ಗಳ ಸ್ವೀಕಾರ.
ಭೂತಾನ್ನಲ್ಲಿ ಇಂದಿನ ಭೀಮ್-ಯುಪಿಐ, ಉಭಯ ದೇಶಗಳ ಪಾವತಿ ಮೂಲಸೌಕರ್ಯಗಳು ತಡೆರಹಿತ ಸಂಪರ್ಕ ಹೊಂದಿವೆ ಮತ್ತು ಪ್ರತಿವರ್ಷ ಭೂತಾನ್ಗೆ ಪ್ರಯಾಣಿಸುವ ಭಾರತದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ. ಇದು ಕೇವಲ ಬಟನ್ ಸ್ಪರ್ಶದಲ್ಲಿ ಹಣವಿಲ್ಲದ ವಹಿವಾಟಿನ ಮೂಲಕ ಪ್ರಯಾಣ ಹಾಗೂ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತದೆ.
ಚಾಲನೆಯ ಭಾಗವಾಗಿ, ಭೂತಾನ್ನ ಸ್ಥಳೀಯ ಸಮುದಾಯಗಳು ಸಾವಯವವಾಗಿ ತಯಾರಿಸಿದ ತಾಜಾ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಭೂತಾನ್ ಒಜಿಒಪಿ ಔಟ್ ಲೆಟ್ನಿಂದ ಸಾವಯವ ಉತ್ಪನ್ನವನ್ನು ಖರೀದಿಸಲು ಭೀಮ್-ಯುಪಿಐ ಬಳಸಿ ನಿರ್ಮಲಾ ಸೀತಾರಾಮನ್ ಅವರು ನೇರ ವಹಿವಾಟು ನಡೆಸಿದರು.
ಭೂತಾನ್, ಕ್ಯೂಆರ್ ನಿಯೋಜನೆಗಾಗಿ ಯುಪಿಐ ಮಾನದಂಡಗಳನ್ನು ಅಳವಡಿಸಿಕೊಂಡ ಮತ್ತು ಭೀಮ್ ಆ್ಯಪ್ ಮೂಲಕ ಮೊಬೈಲ್ ಆಧಾರಿತ ಪಾವತಿಗಳನ್ನು ಸ್ವೀಕರಿಸಿದ ನಮ್ಮ ಹತ್ತಿರದ ನೆರೆಯ ಮೊದಲ ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.