ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟಾಯ್ಕಥಾನ್-2021 ಭಾಗವಹಿಸಿದವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ್ದು, ಸಂಪ್ರದಾಯ ಮತ್ತು ತಂತ್ರಜ್ಞಾನವು ಆತ್ಮನಿರ್ಭರ ಭಾರತದ ಉಪಕ್ರಮವನ್ನುಉತ್ತೇಜಿಸುತ್ತದೆ. ಆಟಿಕೆಗಳು ಮತ್ತು ಆಟಗಳು ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತವೆ ಎಂದಿದ್ದಾರೆ.
ಟಾಯ್ಕಾಥಾನ್ 2021 ಅನ್ನು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ, ಜವಳಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಜಂಟಿಯಾಗಿ ಈ ವರ್ಷದ ಜನವರಿ 5 ರಂದು ಆಯೋಜನೆಗೊಳಿಸಿತ್ತು. ಇಂದು ಅದರ ಫಿನಾಲೆಯಾಗಿದೆ.
ನವೀನ ಆಟಿಕೆಗಳು ಮತ್ತು ಆಟಗಳ ಕಲ್ಪನೆಗಳನ್ನು ಉತ್ತೇಜಿಸಲು ಟಾಯ್ಕಾಥಾನ್ ಪ್ರಾರಂಭಿಸಲಾಯಿತು. ಸಂವಾದದ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರು ಉಪಸ್ಥಿತರಿದ್ದರು.
ಟಾಯ್ಕಥಾನ್ 2021 ಗಾಗಿ ದೇಶಾದ್ಯಂತ ಸುಮಾರು ಒಂದು ಲಕ್ಷ 20 ಸಾವಿರ ಮಂದಿ ನೋಂದಣಿ ಮಾಡಿದ್ದರು ಮತ್ತು 17 ಸಾವಿರಕ್ಕೂ ಹೆಚ್ಚು ವಿಚಾರಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ 1, 567 ವಿಚಾರಗಳನ್ನು ಮೂರು ದಿನಗಳ ಆನ್ಲೈನ್ ಟಾಯ್ಕಥಾನ್ ಗ್ರ್ಯಾಂಡ್ ಫಿನಾಲೆಗಾಗಿ ಕಿರುಪಟ್ಟಿ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.