ನವದೆಹಲಿ: ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಾಗತಿಕ ಏಕತೆ, ನಾಯಕತ್ವ ಮತ್ತು ಐಕಮತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಮತ್ತು ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಸಮಾಜಗಳ ವಿಶೇಷ ಜವಾಬ್ದಾರಿಗಳ ಬಗ್ಗೆ ಒತ್ತಿ ಹೇಳಿದ್ದಾರೆ.
ವರ್ಚುವಲ್ ಮೋಡ್ ಮೂಲಕ ಜಿ 7 ಶೃಂಗಸಭೆಯ ಮೊದಲ ಔಟ್ರೀಚ್ ಅಧಿವೇಶನದಲ್ಲಿ ಭಾಗವಹಿಸಿದ ಮೋದಿ, ಸಭೆಯು ಇಡೀ ಜಗತ್ತಿಗೆ ‘ಒನ್ ಅರ್ಥ್ ಒನ್ ಹೆಲ್ತ್’ ಸಂದೇಶವನ್ನು ಕಳುಹಿಸಬೇಕು ಎಂದು ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತದ ‘ಇಡೀ ಸಮಾಜ’ದ ವಿಧಾನವು ಸರ್ಕಾರ, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಎಲ್ಲಾ ಹಂತದ ಪ್ರಯತ್ನಗಳೊಂದಿಗೆ ಸಮನ್ವಯ ಹೊಂದಿದೆ ಎಂದಿದ್ದಾರೆ.
ಸಂಪರ್ಕ ಪತ್ತೆ ಮತ್ತು ಲಸಿಕೆ ನಿರ್ವಹಣೆಗೆ ಡಿಜಿಟಲ್ ಪರಿಕರಗಳನ್ನು ಭಾರತ ಯಶಸ್ವಿಯಾಗಿ ಬಳಕೆಯನ್ನು ಮಾಡಿದ ಬಗ್ಗೆ ಪ್ರಧಾನಿ ವಿವರಿಸಿದರು. ತನ್ನ ಅಭಿವೃದ್ಧಿ ಮತ್ತು ಪರಿಣತಿಯನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಭಾರತ ಇಚ್ಛೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಆರೋಗ್ಯ ಆಡಳಿತವನ್ನು ಸುಧಾರಿಸಲು ಸಾಮೂಹಿಕ ಪ್ರಯತ್ನಗಳಿಗೆ ಪ್ರಧಾನಿ ಮೋದಿ ಭಾರತದ ಬೆಂಬಲವನ್ನು ನೀಡಿದರು. ಕೋವಿಡ್ ಸಂಬಂಧಿತ ತಂತ್ರಜ್ಞಾನಗಳ ಮೇಲೆ TRIPS ಮನ್ನಾ ಮಾಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ WTO ನಲ್ಲಿ ಮಾಡಿದ ಪ್ರಸ್ತಾಪಕ್ಕೆ ಅವರು G7 ನ ಬೆಂಬಲವನ್ನು ಕೋರಿದರು. ಆಸ್ಟ್ರೇಲಿಯಾ ಮತ್ತು ಇತರರು ಬೆಂಬಲ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.