ಲಕ್ನೋ: ಪಠ್ಯಕ್ರಮ ಪರಿಷ್ಕರಣೆಯ ಭಾಗವಾಗಿ, ಉತ್ತರ ಪ್ರದೇಶದ ಸುಮಾರು 1.59 ಲಕ್ಷ ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಶೀಘ್ರದಲ್ಲೇ ಕೋವಿಡ್ -19, ವೈದಿಕ ಗಣಿತ ಮತ್ತು ನಮಾಮಿ ಗಂಗೆಗೆ ಸಂಬಂಧಿಸಿದ ಪಾಠಗಳನ್ನು ಅಧ್ಯಯನ ಮಾಡಲಿದ್ದಾರೆ.
ಇದಲ್ಲದೆ, ಸಂಸ್ಕೃತವನ್ನು ಈಗಿರುವ ಮೂರನೇ ತರಗತಿಯ ಬದಲು ಒಂದನೇ ತರಗತಿಯಿಂದಲೇ ಕಲಿಸಲು ನಿರ್ಧರಿಸಲಾಗಿದೆ.
ಹೊಸ ಪಠ್ಯಕ್ರಮವನ್ನು ಮೂಲ ಶಿಕ್ಷಣ ಮಂಡಳಿ ಇತ್ತೀಚೆಗೆ ಅನುಮೋದಿಸಿದೆ.
“ಪಠ್ಯಕ್ರಮವನ್ನು ಪರಿಷ್ಕರಿಸುವುದು ಮತ್ತು ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವುದು ನಿರಂತರ ಪ್ರಕ್ರಿಯೆಯಾಗಿದ್ದು, ಇದನ್ನು ನಮ್ಮ ಪರಿಣಿತ ಶಿಕ್ಷಣ ತಜ್ಞರ ತಂಡದೊಂದಿಗೆ ಸಮಾಲೋಚಿಸಿ ನಡೆಸಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳನ್ನು ಸಮಕಾಲೀನ ಜ್ಞಾನಕ್ಕೆ ಹತ್ತಿರಗೊಳಿಸುವುದು ಇದರ ಉದ್ದೇಶ” ಎಂದು ಯುಪಿ ಮೂಲಭೂತ ಶಿಕ್ಷಣ ನಿರ್ದೇಶಕ ಸರ್ವೇಂದ್ರ ವಿಕ್ರಮ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.
ಸರ್ಕಾರ ನಡೆಸುವ 45,625 ಉನ್ನತ ಪ್ರಾಥಮಿಕ ಶಾಲೆಗಳ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳು ಕೋವಿಡ್ -19 ಬಗ್ಗೆ ಕಲಿಯಲಿದ್ದು, ಅದನ್ನು ಅವರ ವಿಜ್ಞಾನ ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ. ಅಲ್ಲದೆ, 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ ವೇದ ಗಣಿತದ ಅಧ್ಯಾಯ ಇರಲಿದೆ ಎಂದು ಮೂಲಭೂತ ಶಿಕ್ಷಣ ವಿಭಾಗದ ಅಧಿಕಾರಿಗಳು ತಿಳಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.