News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣ ಬಲವಿದ್ದರಷ್ಟೇ ರಾಜಕೀಯ ಎಂಬುದನ್ನು ಸುಳ್ಳು ಮಾಡಿದ ಚಂದನಾ ಬೌರಿ

ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಕೇವಲ ಮೂರು ಸ್ಥಾನ ಹೊಂದಿದ್ದ ಬಿಜೆಪಿ ಇದೀಗ ಅಲ್ಲಿ 75ಕ್ಕೂ ಅಧಿಕ ಸ್ಥಾನ ಪಡೆದುಕೊಂಡಿದೆ. ಇನ್ನೊಂದೆಡೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಎದುರು ಸೋತಿದ್ದಾರೆ.

ಇಷ್ಟೆಲ್ಲಾ ವಿಶೇಷತೆಗಳ ನಡುವೆ ಎಲ್ಲರ ಗಮನ ಸೆಳೆದಿದ್ದು ಸಾಲ್ಟೋರಾ ಅಸೆಂಬ್ಲಿಗಾಗಿ ಬಿಜೆಪಿಯಿಂದ ಕಣಕ್ಕಿಳಿದ ಕೂಲಿ ಕಾರ್ಮಿಕನ ಪತ್ನಿ ಚಂದನಾ ಬೌರಿ ಅವರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ.  ಅತ್ಯಂತ ಬಡ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ 30 ವರ್ಷದ ಅವರು ಮೂವರು ಮಕ್ಕಳ ತಾಯಿ ಕೂಡ ಹೌದು.

ಬಂಕುರಾ ಜಿಲ್ಲೆಯ ಸಾಲ್ಟೋರಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ಅವರನ್ನು 4,145 ಮತಗಳಿಂದ ಸೋಲಿಸಿ ಚಂದನಾ ಬೌರಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಂತರ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಚಂದನಾ ಬೌರಿ, ಬಿಜೆಪಿ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಕೊನೆ ಕ್ಷಣದವರೆಗೂ ನನಗೆ ತಿಳಿದಿರಲಿಲ್ಲ. ಪಕ್ಷವು ನನಗೆ ಟಿಕೆಟ್ ನೀಡುವ ಬಗ್ಗೆ ಸುಳಿವು ನೀಡಿರಲಿಲ್ಲ, ಸ್ಥಳೀಯ ನಾಯಕತ್ವವೇ ನನ್ನ ಹೆಸರನ್ನು ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನನಗೆ ಮಾಹಿತಿ ನೀಡಿತು. ಅದರ ನಂತರವೇ ನನಗೆ ತಿಳಿಯಿತು” ಎಂದಿದ್ದರು.

 ನಟ ಮಿಥುನ್ ಚಕ್ರವರ್ತಿ ಅವರು ಬೌರಿ ಅವರ ಪರವಾಗಿ ಸಾಲ್ಟೋರಾದಲ್ಲಿ ಚುನಾವಣಾ ಮತ ಪ್ರಚಾರವನ್ನೂ ಮಾಡಿದ್ದರು. ಅವರ ಪ್ರಚಾರ ಕಾರ್ಯದ ಆರಂಭ ಇಲ್ಲಿಂದಲೇ ನಡೆದಿತ್ತು.

ಮಿಥುನ್ ಚಕ್ರವರ್ತಿ ತಮ್ಮ ವಿಧಾನಸಭಾ ಕ್ಷೇತ್ರದಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಚಂದನಾ ಬೌರಿ ಹೇಳಿದ್ದರು

ಮೂವರು ಮಕ್ಕಳ ತಾಯಿಯಾದ ಚಂದನಾ ಬೌರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಮತ್ತು ಒಬ್ಬ ಮಗನನ್ನು ತಾಯಿ ಮತ್ತು ಅತ್ತೆಯೊಂದಿಗೆ ಬಿಟ್ಟು ಅಭಿಯಾನದ ಪ್ರಯಾಣವನ್ನು ಕೈಗೊಂಡಿದ್ದರು.

ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಆಗಿ ಕೆಲಸ ಮಾಡುವ ಪತಿಯೂ ಇವರಿಗೆ ಬೆಂಬಲವಾಗಿ ನಿಂತು ಸಹಾಯ ಮಾಡಿದ್ದಾರೆ. ಪತಿಯ ಕಾರ್ಯದಲ್ಲೂ ಬೌರಿ ಕೈಜೋಡಿಸುತ್ತಾರೆ.

“ನಾನು ಹೊರಗೆ ಹೋಗುವಾಗ, ನನ್ನ ತಾಯಿ ಮತ್ತು ಅತ್ತೆ ನನ್ನ ಮನೆ ಮತ್ತು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ನನ್ನ ಪತಿ ಕೂಡ ನನಗೆ ಸಹಾಯ ಮಾಡುತ್ತಿದ್ದಾರೆ ”ಎಂದು ಚಂದನಾ ಬೌರಿ ಹೇಳಿದ್ದಾರೆ.

ಚಂದನಾ ಅವರು 2014 ರಿಂದ ಸಾಲ್ಟೋರಾದಲ್ಲಿ ಬಿಜೆಪಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಂತರ ಅವರು 2018 ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಏರಿದರು ಮತ್ತು ನಂತರ 2019 ರಲ್ಲಿ ಬಿಜೆಪಿಯ ಬಂಕುರಾ ಜಿಲ್ಲಾ ಸಮಿತಿಯ ಭಾಗವಾದರು.

“ಬಿಜೆಪಿ ಎಲ್ಲರಿಗೂ ಸೇರಿದೆ, ಶ್ರೀಮಂತ ಅಥವಾ ಬಡವರ ನಡುವೆ ಇಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪಕ್ಷವು ಬಡ ಮಹಿಳೆಗೆ ತುಂಬಾ ಗೌರವವನ್ನು ನೀಡಿದೆ, ನನಗೆ ಘನತೆಯುತ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ನಾನು ಪಕ್ಷಕ್ಕೆ ಕೃತಜ್ಞಳಾಗಿದ್ದೇನೆ ”ಎಂದು ಚಂದನಾ ಹೇಳುತ್ತಾರೆ.

ಪಶ್ಚಿಮಬಂಗಾಳದ ಬಿಜೆಪಿ ಅಭ್ಯರ್ಥಿ ಚಂದನಾ ಅವರ ಚುನಾವಣಾ ಗೆಲುವು ರಾಜಕೀಯ ಎಂಬುದು ಕೇವಲ ಸಿರಿವಂತರಿಗೆ ಮಾತ್ರವಲ್ಲ ಬಡವರೂ ಜನರ ಮನಗೆದ್ದು ಉನ್ನತ ಸ್ಥಾನಕ್ಕೆ ಏರಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಶಾಸಕಿಯಾಗಿ ಆಯ್ಕೆಯಾಗಿರುವ ಅವರು ಕೂಲಿ ಕಾರ್ಮಿಕನ ಪತ್ನಿ, ಅವರ ಬಳಿ ಇರುವ ಆಸ್ತಿಯೆಂದರೆ ಕೇವಲ 31,985 ರೂಪಾಯಿ ಹಣ, ಮೂರು ದನ ಮತ್ತು ಒಂದು ಗುಡಿಸಲು ಅಷ್ಟೇ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top