News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

5,000 ಆಮ್ಲಜನಕ ಸಿಲಿಂಡರ್‌ಗಳ ಉಚಿತ ಮರುಪೂರಣ: ಉದ್ಯಮಿಯ ಸಮಾಜ ಸೇವೆ

ಕಳೆದ ವರ್ಷ ಸಾಂಕ್ರಾಮಿಕ ರೋಗ ಆರಂಭವಾಗಿನಿಂದಲೂ ಸಂಕಷ್ಟದ ಕಾಲದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಲು  ಪ್ರಯತ್ನಿಸುತ್ತಿರುವ ಕೋವಿಡ್ ಯೋಧರು ಇದ್ದಾರೆ.

ಬೆಳಗಾವಿಯ ಸಮಾಜ ಸೇವಕ ಮತ್ತು ಉದ್ಯಮಿಯೊಬ್ಬರು ಕೋವಿಡ್ ರೋಗಿಗಳನ್ನು ಉಸಿರಾಟದ ಸಮಸ್ಯೆಗಳಿಂದ ರಕ್ಷಿಸಲು ಶ್ರಮಿಸುತ್ತಿದ್ದಾರೆ.  ಅವರೇ ವೆಂಕಟೇಶ್‌ ಪಾಟಿಲ್.‌ ಬೆಳಗಾಂ ಆಕ್ಸಿಜನ್‌ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ಮಾಲೀಕ. ಇದುವರೆಗೆ  5 ಸಾವಿರಕ್ಕೂ ಅಧಿಕ ಆಮ್ಲಜನಕ ಸಿಲಿಂಡರ್‌ ಅನ್ನು ಇವರು ಉಚಿತವಾಗಿ ಮರುಪೂರಣ ಮಾಡಿದ್ದಾರೆ. ಈ ಮೂಲಕ ಕೋವಿಡ್‌ ಪೀಡಿತರ ಜೀವ ಕಾಪಾಡಿದ್ದಾರೆ.

ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಹಲವಾರು ಕೋವಿಡ್ ರೋಗಿಗಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಲವಾರು ಎನ್‌ಜಿಒಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅಗತ್ಯವಿರುವವರಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಲು ಪ್ರಾರಂಭಿಸಿವೆ. ಆದರೂ, ಅವುಗಳನ್ನು ಬಳಸಿದ ನಂತರ, ಅವುಗಳನ್ನು ಮರುಪೂರಣ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಪ್ರಸ್ತುತ ಎರಡನೇ ಅಲೆಯನ್ನು ದೇಶ ಅನುಭವಿಸುತ್ತಿದೆ, ದೇಶವು ಆಮ್ಲಜನಕದ ಪೂರೈಕೆಗಾಗಿ ತೀವ್ರ ಒತ್ತಡಕ್ಕೆ ಒಳಗಾಗಿದೆ. ಇಂತಹ ಸಂದರ್ಭದಲ್ಲಿ  ಪಾಟೀಲ್‌ ಅವರ ಬೆಳಗಾಂ ಆಕ್ಸಿಜನ್‌ ಪ್ರೈವೇಟ್‌ ಲಿಮಿಟೆಡ್ ಕಂಪನಿ 5000 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳನ್ನು ಉಚಿತವಾಗಿ ಮರುಪೂರಣಗೊಳಿಸಿದ ಮತ್ತು ಇದನ್ನು ಎನ್‌ಜಿಒ ಮೂಲಕ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಸಾಂಕ್ರಾಮಿಕದ ಈ ಸಮಯದಲ್ಲಿ ರಾಷ್ಟ್ರವನ್ನು ಬೆಂಬಲಿಸುವುದು ತನ್ನ ಕರ್ತವ್ಯವೆಂದು ಭಾವಿಸಿರುವ ವೆಂಕಟೇಶ್ ಪಾಟೀಲ್ ಅವರು ಸಿಲಿಂಡರ್‌ಗಳನ್ನು ಉಚಿತವಾಗಿ ಮರುಪೂರಣಗೊಳಿಸಲು ಎನ್‌ಜಿಒಗಳಿಗೆ ಸಹಾಯ ಮಾಡುತ್ತಿದ್ದಾರೆ. ಪಾಟೀಲ್ ಒಂದು ರೂಪಾಯಿ ಕೂಡ ವಿಧಿಸದೆ ಅವುಗಳನ್ನು ಪುನಃ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.

ಬೆಳಗಾಂ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ ಮತ್ತು ಇವರ ಕಂಪನಿ ಆಕ್ಸಿಜನ್ ಸರಬರಾಜನ್ನು ಯಾವುದೇ ಸಮಯದಲ್ಲೂ ನಿಲ್ಲಿಸುವುದಿಲ್ಲ. ರೋಗಿಗಳು ಬದುಕುಳಿಯುತ್ತಾರೆ ಎಂಬುದನ್ನು ಖಚಿತಪಡಿಸುವುದು ನಮ್ಮ ಕರ್ತವ್ಯ ಎಂದು ಪಾಟೀಲ್‌ ಹೇಳುತ್ತಾರೆ.

ಅನೇಕ ಎನ್‌ಜಿಒಗಳು ಸಿಲಿಂಡರ್‌ಗಳನ್ನು ತೆಗೆದುಕೊಂಡು ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತವೆ.  ಪಾಟೀಲ್ ರಾಷ್ಟ್ರದ ಕಡೆಗೆ ತನ್ನ ಕರ್ತವ್ಯವೆಂದು ಭಾವಿಸಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top