ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಮಂಗಳವಾರ ಸಿಯಾಚಿನ್ ಮತ್ತು ಪೂರ್ವ ಲಡಾಕ್ನಲ್ಲಿರುವ ಫಾರ್ವರ್ಡ್ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಅವರೊಂದಿಗೆ ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ, ಮತ್ತು ಲೇಹ್ ಮೂಲದ ಫೈರ್ & ಫ್ಯೂರಿ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿ.ಜಿ.ಕೆ. ಮೆನನ್ ಉಪಸ್ಥಿತರಿದ್ದರು.
ಸೈನ್ಯದ ಮುಖ್ಯಸ್ಥರಿಗೆ ಲೆಫ್ಟಿನೆಂಟ್ ಜನರಲ್ ಮೆನನ್ ಅವರು ಕಾರ್ಪ್ಸ್ ವಲಯದಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಿದ್ಧತೆ ಕುರಿತು ವಿವರಿಸಿದರು ಎಂದು ಸೇನೆಯ ಹೇಳಿಕೆ ತಿಳಿಸಿದೆ.
ಜನರಲ್ ನರವಾನೆ ಸೈನಿಕರೊಂದಿಗೆ ಸಂವಹನ ನಡೆಸಿದರು. ಕೆಲವು ಕಠಿಣ ಭೂಪ್ರದೇಶ, ಎತ್ತರ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ನಿಯೋಜಿಸಲ್ಪಟ್ಟರೂ ಅಚಲತೆ ಮತ್ತು ಹೆಚ್ಚಿನ ಸ್ಥೈರ್ಯ ತೋರಿಸುತ್ತಿರುವ ಯೋಧರನ್ನು ಅಭಿನಂದಿಸಿದರು.
ಪೂರ್ವ ಲಡಾಖ್ನಾದ್ಯಂತದ ಉದ್ವಿಗ್ಬ ಪರಿಸ್ಥಿತಿಯನ್ನು ಬಗೆಹರಿಸಲಾಗದಿದ್ದರೂ, ಪಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯಗಳ ನಡುವೆ ಆರಂಭಿಕ ಸೇನಾ ಹಿಂಪಡೆಯುವಿಕೆ ನಡೆದ ನಂತರ ಇದು ಲಡಾಖ್ಗೆ ಅವರ ಮೊದಲ ಭೇಟಿಯಾಗಿದೆ. ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಘರ್ಷಣೆ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.