ನವದೆಹಲಿ: ಕೋವಿಡ್- 19 ರ ವಿರುದ್ಧ ರಾಷ್ಟ್ರದ ಹೋರಾಟದ ಭಾಗವಾಗಿ, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಸ್ಥಳೀಯ ಆಡಳಿತಕ್ಕೆ ಬೆಂಬಲವನ್ನು ನೀಡುವ ಸಲುವಾಗಿ ಭಾರತೀಯ ನೌಕಾಪಡೆಯು ಕೊಚ್ಚಿಯ ಸದರ್ನ್ ನೇವಲ್ ಕಮಾಂಡ್ ಕೇಂದ್ರ ಕಛೇರಿಯ ಅಡಿಯಲ್ಲಿ ಆಕ್ಸಿಜನ್ ಎಕ್ಸ್ಪ್ರೆಸ್ ಮಿಷನ್ ಅನ್ನು ಮುನ್ನಡೆಸುತ್ತಿದೆ.
ಇಂದು ಮುಂಜಾನೆ, ಕೊಚ್ಚಿ ಮೂಲದ ಐಎನ್ಎಸ್ ಶಾರ್ದ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಲಕ್ಷದ್ವೀಪದ ರಾಜಧಾನಿ ಕವರಟ್ಟಿಗೆ ವರ್ಗಾಯಿಸಿದೆ. 35 ಆಕ್ಸಿಜನ್ ಸಿಲಿಂಡರ್ಗಳು, ರಾಪಿಡ್ ಆಂಟಿಜೆನ್ ಡಿಟೆಕ್ಷನ್ ಟೆಸ್ಟ್ (ಆರ್ಎಡಿಟಿ) ಕಿಟ್ಗಳು, ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್ (ಪಿಪಿಇ), ಮುಖಗವಸುಗಳು ಮತ್ತು ಕೋವಿಡ್- 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ವಸ್ತುಗಳನ್ನು ಇದು ಒಳಗೊಂಡಿದೆ.
ಹೆಚ್ಚುವರಿಯಾಗಿ, ದ್ವೀಪಗಳಿಂದ 41 ಖಾಲಿ ಆಕ್ಸಿಜನ್ ಸಿಲಿಂಡರ್ಗಳನ್ನು ಮೇಘನಾ ಎಂಬ ಭಾರತೀಯ ನೌಕಾಪಡೆಯ ಬಾಡಿಗೆ ಹಡಗಿನಲ್ಲಿ ಸಾಗಿಸಲಾಗಿದೆ. ಖಾಲಿ ಸಿಲಿಂಡರ್ಗಳನ್ನು ಪುನಃ ತುಂಬಿಸಲು ಈ ಹಡಗು ಈಗ ಕೊಚ್ಚಿಗೆ ತೆರಳಿದೆ ಮತ್ತು ಆಕ್ಸಿಜನ್ ಎಕ್ಸ್ಪ್ರೆಸ್ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಭರ್ತಿ ಮಾಡಿದ ಸಿಲಿಂಡರ್ಗಳೊಂದಿಗೆ ಲಕ್ಷದ್ವೀಪಕ್ಕೆ ಹಿಂತಿರುಗಲಿದೆ. ಲಕ್ಷದ್ವೀಪದ ಆಡಳಿತದ ಸಮನ್ವಯದೊಂದಿಗೆ ಲಕ್ಷದ್ವೀಪದಲ್ಲಿ ನೌಕಾ ಅಧಿಕಾರಿಗಳ ಉಸ್ತುವಾರಿಯಲ್ಲಿ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.