ಢಾಕಾ: ಭಾರತೀಯ ಹೈಕಮಿಷನ್ನ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರ (ಐಜಿಸಿಸಿ) ಇಂದು ಬಾಂಗ್ಲಾದೇಶದಲ್ಲಿ ಸಂಸ್ಕೃತ ಕಲಿಕಾ ಆ್ಯಪ್ ಅನ್ನು ಪ್ರಾರಂಭಿಸಿದೆ. ಸಂಸ್ಕೃತ ಭಾಷೆಯ ಅಪ್ಲಿಕೇಶನ್ ವಿಶ್ವದಾದ್ಯಂತದ ವಿದ್ಯಾರ್ಥಿಗಳು, ಧಾರ್ಮಿಕ ವಿದ್ವಾಂಸರು, ಇಂಡಾಲಜಿಸ್ಟ್ಗಳು ಮತ್ತು ಇತಿಹಾಸಕಾರರಲ್ಲಿ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್) ನಡೆಸುತ್ತಿರುವ ಅಭಿಯಾನದ ಒಂದು ಭಾಗವಾಗಿದೆ.
ಸಂಸ್ಕೃತ ಕಲಿಕಾ ಅಪ್ಲಿಕೇಶನ್ ‘ಲಿಟಲ್ ಗುರು’ ಸಂವಾದಾತ್ಮಕ ವೇದಿಕೆಯನ್ನು ಆಧರಿಸಿದ್ದು, ಇದು ಸಂಸ್ಕೃತ ಕಲಿಕೆಯನ್ನು ಸುಲಭ, ಮನರಂಜನೆ ಮತ್ತು ವಿನೋದಮಯವಾಗಿಸುತ್ತದೆ.
ಈ ಅಪ್ಲಿಕೇಶನ್ ಈಗಾಗಲೇ ಸಂಸ್ಕೃತವನ್ನು ಕಲಿಯುತ್ತಿರುವ ಜನರಿಗೆ ಅಥವಾ ಸಂಸ್ಕೃತವನ್ನು ಕಲಿಯಲು ಬಯಸುವವರಿಗೆ ಆಟಗಳು, ಸ್ಪರ್ಧೆ, ರಿವಾರ್ಡ್, ಸಂವಹನ ಇತ್ಯಾದಿಗಳ ಆಧಾರದ ಮೇಲೆ ಸುಲಭವಾದ ರೀತಿಯಲ್ಲಿ ಕಲಿಯಲು ಮಾಡಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಶಿಕ್ಷಣವನ್ನು ಮನರಂಜನೆಯೊಂದಿಗೆ ಸಂಯೋಜಿಸುತ್ತದೆ.
ಐಸಿಸಿಆರ್ ಸಂಸ್ಕೃತವನ್ನು ಕಲಿಯಲು ಆಸಕ್ತಿ ಹೊಂದಿರುವ ಜನರಿಂದ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಮನವಿಗಳನ್ನು ಸ್ವೀಕರಿಸುತ್ತಿದೆ. ಬೌದ್ಧ, ಜೈನ ಮತ್ತು ಇತರ ಧಾರ್ಮಿಕ ಗ್ರಂಥಗಳು ಸಂಸ್ಕೃತದಲ್ಲಿವೆ. ಭಾಷೆಯನ್ನು ಕಲಿಯಲು ಸಹಾಯ ಮಾಡುವಂತೆ ಆ ದೇಶಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಸಂಸ್ಕೃತವನ್ನು ಕಲಿಸುವ ಪ್ರಪಂಚದಾದ್ಯಂತದ ಹಲವಾರು ವಿಶ್ವವಿದ್ಯಾಲಯಗಳು ಈ ಆ್ಯಪ್ನಲ್ಲಿ ಆಸಕ್ತಿ ತೋರಿಸಿವೆ. ವಿದ್ಯಾರ್ಥಿಗಳಿಗೆ ಸಂಸ್ಕೃತದ ಕಲಿಕೆಯನ್ನು ಮುಂದುವರಿಸಲು ಬಯಸುವ ಇತರರಿಗೂ ಅಪ್ಲಿಕೇಶನ್ ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.