ತಿರುವನಂತಪುರಂ: 51 ವರ್ಷದ ಆನೆ ಅಂಬಲಪ್ಪುಳ ವಿಜಯಕೃಷ್ಣನ್ ಸಾವಿಗೆ ಕಾರಣವಾದ ತ್ರಿವಂಕೂರು ದೇವಸ್ವಂ ಮಂಡಳಿಯ ವಿರುದ್ಧ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆನೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ.
ಟಿಡಿಬಿ ಬಳಿಯಿದ್ದ ಅಂಬಲಪ್ಪುಳ ವಿಜಯಕೃಷ್ಣನ್ ಆನೆ ಶ್ರೀ ಕೃಷ್ಣ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ (ಏಪ್ರಿಲ್ 8) ನಿಧನವಾಯಿತು.
ಕಳೆದ ಕೆಲವು ದಿನಗಳಿಂದ ಆನೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿತ್ತು ಎಂದು ದೇವಸ್ವಂ ಅಧಿಕಾರಿಗಳು ಹೇಳುತ್ತಿದ್ದರೆ, ದೇವಾಲಯದ ಅಧಿಕಾರಿಗಳು ನಿರಂತರವಾಗಿ ಕೊಲ್ಲಂ ಮತ್ತು ಪಥನಮತ್ತಟ್ಟ ಜಿಲ್ಲೆಗಳ ವಿವಿಧ ದೇವಾಲಯಗಳಲ್ಲಿ ಮೆರವಣಿಗೆ ನಡೆಸಿದ್ದರಿಂದ ಆನೆ ತೀವ್ರ ಹಿಂಸೆ ಅನುಭವಿಸಿ ಸಾವಿಗೀಡಾಗಿದೆ ಎಂದು ದೇವಾಲಯದ ಭಕ್ತರು, ಆನೆ ಪ್ರೇಮಿಗಳು ಆರೋಪಿಸಿದ್ದಾರೆ .
ಆನೆಯ ಸಾವಿನ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ, ಆನೆ ವಿಜಯಕೃಷ್ಣನ್ ತನ್ನ ಮಾವುತ ಮತ್ತು ದೇವಸ್ವಂ ಅಧಿಕಾರಿಗಳಿಂದ ಕೆಟ್ಟದಾಗಿ ನಡೆಸಲ್ಪಟ್ಟ ಕಾರಣ ಮತ್ತು ಚಿಕಿತ್ಸೆ ಪಡೆಯದ ಕಾರಣ ಸಾವನ್ನಪ್ಪಿದೆ ಎಂದು ಆರೋಪಿಸಿ ಭಕ್ತರ ಗುಂಪು ದೇವಸ್ವಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.