ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿ ಜನರು ಪರದಾಡುವಂತಾಗಿದೆ. ರಾಜ್ಯದ ಕೃಷಿಕರನ್ನು ಗಮನದಲ್ಲಿಟ್ಟುಕೊಂಡು ಇಫ್ಕೋ ಸಂಸ್ಥೆಯು ರಸಗೊಬ್ಬರವನ್ನು ಹಳೆಯ ದರದಲ್ಲೇ ಮಾರಾಟ ಮಾಡುವ ಮೂಲಕ ರಾಜ್ಯದ ರೈತರಿಗೆ ನೆರವಾಗಲು ಮುಂದಾಗಿದೆ.
ಈ ಸಂಬಂಧ ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದು, ಸಹಕಾರಿ ವಲಯದ ‘ಇಫ್ಕೋ’ ಕಂಪನಿಯು ಸದ್ಯ ರಾಜ್ಯದಲ್ಲಿ ದಾಸ್ತಾನು ಇರುವ ತನ್ನ12.25 ಲಕ್ಷ ಕ್ವಿಂಟಲ್ ಎನ್ಪಿಕೆ, ಡಿಏಪಿ ಮತ್ತಿತರ ನಮೂನೆಯ (ಯೂರಿಯಾ ಹೊರತಾಗಿ) ರಸಗೊಬ್ಬಗಳನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ನಿರ್ಧಿಸಿದೆ. ರಾಜ್ಯದ ರೈತರು ಇದರ ಸದುಪಯೋಗ ಪಡೆಯಬೇಕು. ಇದರಿಂದ ಅನ್ನದಾತರಿಗೆ ನೂರಾರು ಕೋಟಿ ರೂ ಉಳಿಯಲಿದೆ ಎಂದು ತಿಳಿಸಿದ್ದಾರೆ.
ಸಹಕಾರಿ ವಲಯದ 'ಇಫ್ಕೋ' ಕಂಪನಿಯು ಸದ್ಯ ರಾಜ್ಯದಲ್ಲಿ ದಾಸ್ತಾನು ಇರುವ ತನ್ನ12.25 ಲಕ್ಷ ಕ್ವಿಂಟಲ್ ಎನ್ಪಿಕೆ, ಡಿಏಪಿ ಮತ್ತಿತರ ನಮೂನೆಯ (ಯೂರಿಯಾ ಹೊರತಾಗಿ) ರಸಗೊಬ್ಬಗಳನ್ನು ಹಳೆ ದರದಲ್ಲಿಯೇ ಮಾರಾಟಮಾಡಲು ನಿರ್ಧಿಸಿದೆ. ರಾಜ್ಯದ ರೈತರು ಇದರ ಸದುಪಯೋಗ ಪಡೆಯಬೇಕು. ಇದರಿಂದ ಅನ್ನದಾತರಿಗೆ ನೂರಾರು ಕೋಟಿ ರೂ ಉಳಿಯಲಿದೆ. Thank you #IFFCO pic.twitter.com/dfydbAtEWV
— Sadananda Gowda (@DVSadanandGowda) April 8, 2021
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಹೆಚ್ಚು ಅನುಕೂಲಕಾರಿಯಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.