ನವದೆಹಲಿ: ಹಿಮ ಪರ್ವತಗಳನ್ನು ಕತ್ತರಿಸುವುದು ಸೇರಿದಂತೆ ಆಯಕಟ್ಟಿನ ಹೆದ್ದಾರಿಗಳನ್ನು ನಿರ್ವಹಿಸುವ ರಕ್ಷಣಾ ಸಚಿವಾಲಯದ ಒಂದು ವಿಭಾಗವಾದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಹಿಮಾಚಲ ಪ್ರದೇಶ ಪ್ರವಾಸಿ ತಾಣ ಮನಾಲಿಯನ್ನು ಲಡಾಖ್ನ ಲೇಹ್ನೊಂದಿಗೆ ಎರಡು ತಿಂಗಳು ಮುಂಚಿತವಾಗಿಯೇ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.
ಕರೋನವೈರಸ್ ಸಾಂಕ್ರಾಮಿಕದ ನಡುವೆಯೂ, ಹಿಮಪಾತ ಮತ್ತು ಭೂಕುಸಿತದಂತಹ ವಿಪತ್ತುಗಳು ಎದುರಾದರೂ ಬಿಆರ್ಒ ಈ ಕಾರ್ಯವನ್ನು ಯಶಸ್ಸುಗೊಳಿಸಿದೆ.
ಹಿಮ ತೆರವು ಕಾರ್ಯಾಚರಣೆ ಪೂರ್ಣಗೊಂಡ ನಂತರ ಮಾರ್ಚ್ 28 ರಂದು 428 ಕಿ.ಮೀ.ನ ಮನಾಲಿ-ಲೇಹ್ ಹೆದ್ದಾರಿಯನ್ನು ವಾಹನ ಚಾಲಕರಿಗೆ ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಚೀನಾ ಮತ್ತು ಪಾಕಿಸ್ಥಾನಗಳ ಗಡಿಯಾಗಿರುವ ಲಡಾಖ್ ಅನ್ನು ಫಾರ್ವರ್ಡ್ ಪ್ರದೇಶಗಳಿಗೆ ಸಂಪರ್ಕಿಸುವ ಈ ಹೆದ್ದಾರಿ ಸಶಸ್ತ್ರ ಪಡೆಗಳ ಚಲನೆ ಮತ್ತು ಸರಕುಗಳ ಸರಬರಾಜಿಗೆ ಕಾರ್ಯತಂತ್ರವಾಗಿ ಮಹತ್ವದ್ದಾಗಿದೆ.
“ಕಳೆದ ನವೆಂಬರ್ನಲ್ಲಿ ಹಿಮಪಾತವು ಪ್ರಾರಂಭವಾಗುವುದಕ್ಕಿಂತ ಮುಂಚೆಯೇ, ನಾವು ಸರ್ಚುವಿನ ಬರಾಲಾಚಾ ಪಾಸ್ನಾದ್ಯಂತ ಯಂತ್ರೋಪಕರಣಗಳನ್ನು ತಂದು ಇರಿಸಿದ್ದೆವು ಮತ್ತು ಪಡಿತರವನ್ನು ಸಂಗ್ರಹಿಸಿದ್ದೆವು” ಎಂದು BRO ನ ಮುಖ್ಯ ಎಂಜಿನಿಯರ್ (ಪ್ರಾಜೆಕ್ಟ್ ದೀಪಕ್) ಬ್ರಿಗೇಡಿಯರ್ ಎಂ.ಎಸ್ ಬಾಗಿ ಮಾಧ್ಯಮಗಳಿಗೆ ತಿಳಿಸಿದರು.
“ಫೆಬ್ರವರಿ ಎರಡನೇ ವಾರದಲ್ಲಿ ಎಂಜಿನಿಯರ್ ಅವರನ್ನು ಒಳಗೊಂಡ ಆರು ಬಿಆರ್ಒ ಸಿಬ್ಬಂದಿಗಳ ತಂಡವು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾರಾಲಾಚಾ ಪಾಸ್ ಅನ್ನು ಚಾರಣ ಮಾಡಿತು. ಎರಡು ಪ್ರಯತ್ನಗಳ ನಂತರ, ಭಾರೀ ಹಿಮಪಾತ ಮತ್ತು ಹಿಮ ಬಿರುಗಾಳಿಗಳ ಬೆದರಿಕೆಯ ಹೊರತಾಗಿಯೂ ಇವರು ಬಾರಾಲಾಚಾ ಪಾಸ್ ಅನ್ನು ದಾಟಲು ಯಶಸ್ವಿಯಾದರು. ಕಿಲ್ಲಿ ಸೆರೈ ತಲುಪಿದ ನಂತರ, ಅವರು ಪಾಸ್ನ ಉತ್ತರ ತುದಿಯಿಂದ ಹಿಮ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು” ಬ್ರಿಗೇಡಿಯರ್ ಬಾಗಿ ವಿವರಿಸಿದ್ದಾರೆ.
ಮನಾಲಿ-ಲೇಹ್ ಹೆದ್ದಾರಿ ರೋಹ್ಟಾಂಗ್ ಪಾಸ್ (13,050 ಅಡಿ), ಬಾರಾಲಾಚಾ ಪಾಸ್ (16,020 ಅಡಿ), ಲಾಚ್ಲುಂಗ್ಲಾ ಪಾಸ್ (16,620 ಅಡಿ) ಮತ್ತು ಟ್ಯಾಂಗ್ಲಾಂಗ್ಲಾ (17,480 ಅಡಿ) ಮೂಲಕ ಚಲಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.