ಶ್ರೀನಗರ: ಕಣಿವೆಯಲ್ಲಿ ನಡೆಯುವ ತುಲಿಪ್ ಹಬ್ಬಕ್ಕೂ ಮುನ್ನ ಶ್ರೀನಗರದ ಜಬರ್ವಾನ್ ಪರ್ವತಗಳ ತಪ್ಪಲಿನಲ್ಲಿರುವ ಭವ್ಯವಾದ ಟುಲಿಪ್ ಉದ್ಯಾನವು ಗುರುವಾರದಿಂದ ಪ್ರವಾಸಿಗರಿಗೆ ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಮಾಹಿತಿ ನೀಡಿದ್ದಾರೆ.
ಬುಧವಾರ ಮಾಡಿದ ಟ್ವೀಟ್ನಲ್ಲಿ, ಜನರು ಅವಕಾಶ ಸಿಕ್ಕಾಗಲೆಲ್ಲಾ ಉದ್ಯಾನವನಕ್ಕೆ ಭೇಟಿ ನೀಡುವಂತೆ ಮೋದಿ ಒತ್ತಾಯಿಸಿದ್ದಾರೆ.
“ನಾಳೆ, ಮಾರ್ಚ್ 25 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷವಾಗಿದೆ. ಜಬರ್ವಾನ್ ಪರ್ವತಗಳ ತಪ್ಪಲಿನಲ್ಲಿರುವ ಭವ್ಯವಾದ ಟುಲಿಪ್ ಉದ್ಯಾನವನವು ಪ್ರವಾಸಿಗರಿಗಾಗಿ ತೆರೆಯುತ್ತದೆ. ಉದ್ಯಾನದಲ್ಲಿ 64 ಕ್ಕೂ ಹೆಚ್ಚು ಪ್ರಭೇದಗಳ 15 ಲಕ್ಷಕ್ಕೂ ಹೆಚ್ಚು ಹೂವುಗಳು ಅರಳುತ್ತವೆ” ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
“ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಮತ್ತು ಸುಂದರವಾದ ಟುಲಿಪ್ ಹಬ್ಬಕ್ಕೆ ಸಾಕ್ಷಿಯಾಗಿ. ಟುಲಿಪ್ಸ್ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಜನರ ಆತ್ಮೀಯ ಆತಿಥ್ಯವನ್ನು ನೀವು ಅನುಭವಿಸುವಿರಿ” ಎಂದು ಅವರು ಹೇಳಿದ್ದಾರೆ.
ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನವೆಂದು ಪರಿಗಣಿಸಲ್ಪಟ್ಟ ಕಾಶ್ಮೀರದ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನವು ಜಬರ್ವಾನ್ ಬೆಟ್ಟಗಳ ಶ್ರೇಣಿಯ ತಪ್ಪಲಿನಲ್ಲಿದೆ ಮತ್ತು ಪ್ರತಿವರ್ಷ ವಿಶ್ವದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕಳೆದ ವರ್ಷ ಮಾರ್ಚ್ನಲ್ಲಿ, ಹೂವಿನ ಕೃಷಿ ಇಲಾಖೆಯು ಸಂದರ್ಶಕರನ್ನು ಸ್ವಾಗತಿಸಲು ಉದ್ಯಾನವನ್ನು ಸಂಪೂರ್ಣವಾಗಿ ಸಿದ್ಧಪಡಿಸಿತ್ತು, ಆದರೆ ಕೇಂದ್ರ ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಇದು ಮುಚ್ಚಲ್ಪಟ್ಟಿತ್ತು.
Tomorrow, 25th March is special for Jammu and Kashmir. A majestic tulip garden on the foothills of the Zabarwan Mountains will open for visitors. The Garden will see over 15 lakh flowers of more than 64 varieties in bloom. pic.twitter.com/LwRPglZ1jO
— Narendra Modi (@narendramodi) March 24, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.