ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಂದಿರ ರಾಮನ ಕೋಟ್ಯಾಂತರ ಭಕ್ತರ ಕನಸಾಗಿದ್ದು, ಅತ್ಯಂತ ಭವ್ಯವಾಗಿ ಇದು ನಿರ್ಮಾಣವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಭವ್ಯ ಮಾತ್ರವಲ್ಲ ಅತ್ಯಂತ ವಿಶೇಷ ರೀತಿಯಲ್ಲೂ ಇದು ತಲೆ ಎತ್ತಲಿದೆ.
ವರದಿಗಳ ಪ್ರಕಾರ, ಶ್ರೀಲಂಕಾದಲ್ಲಿ ರಾವಣ ಸೀತಾದೇವಿಯನ್ನು ಒತ್ತೆಯಾಗಿ ಇರಿಸಿದ್ದ ಜಾಗ ಸೀತಾ ಎಲಿಯಾದ ಕಲ್ಲನ್ನು ಕೂಡ ರಾಮ ಮಂದಿರದ ನಿರ್ಮಾಣ ಬಳಕೆ ಮಾಡಲಾಗುತ್ತಿದೆ. ಈ ಕಲ್ಲನ್ನು ಶ್ರೀಲಂಕಾದ ಹೈಕಮಿಷನರ್ಮಿಲಿಂಡಾ ಮೊರಗೋಡ ಭಾರತಕ್ಕೆ ತರುವ ನಿರೀಕ್ಷೆಯಿದೆ.
ಸೀತಾ ಎಲಿಯಾದಲ್ಲಿ ಸೀತಾ ದೇವಾಲಯ ಇದೆ. ಸೀತೆಯನ್ನು ರಾಕ್ಷಸ ರಾಜ ರಾವಣನು ಸೆರೆಯಲ್ಲಿಟ್ಟುಕೊಂಡಿದ್ದ ಸ್ಥಳವನ್ನು ಮತ್ತು ರಕ್ಷಣೆಗಾಗಿ ಅವಳು ಭಗವಾನ್ ರಾಮನನ್ನು ನಿಯಮಿತವಾಗಿ ಪ್ರಾರ್ಥಿಸುತ್ತಿದ್ದ ಸ್ಥಳವಾಗಿ ಇದು ಗುರುತಿಸಲ್ಪಟ್ಟಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸವನ್ನು ಹಾಕಿದ್ದರು. ಕಳೆದ ವಾರ ದೇಗುಲದ ಅಡಿಪಾಯ ನಿರ್ಮಾಣ ಕಾರ್ಯ ಆರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.