ಲಕ್ನೋ: ಅಯೋಧ್ಯೆಯ ಭವ್ಯ ರಾಮ ಮಂದಿರದ ಅಡಿಪಾಯ ನಿರ್ಮಾಣ ಕಾರ್ಯ ಆರಂಭವಾಗಿದೆ. ಸೋಮವಾರದಿಂದ ಅಯೋಧ್ಯೆಯಲ್ಲಿ ವೇದ ಮತ್ತು ವಾಸ್ತು ಆಚರಣೆಗಳ ನಂತರ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿಗಳು ನಿರ್ಮಾಣ ಕಾರ್ಯವನ್ನು ಆರಂಭಿಸಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿಗಳಾದ ಡಾ.ಅನಿಲ್ ಮಿಶ್ರಾ, ರಾಜಾ ವಿಮಲೆಂದ್ರ ಮೋಹನ್ ಪ್ರತಾಪ್ ಮಿಶ್ರಾ, ಮಹಂತ್ ದಿನೇಂದ್ರ ದಾಸ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಜಾ ಅವರು ಭೂಮಿ ಪೂಜೆ ಮತ್ತು ಇತರ ವೇದ ಮತ್ತು ವಾಸ್ತು ವಿಧಿಗಳನ್ನು ಭಗವಾನ್ ರಾಮ, ಭಗವಾನ್ ಗಣೇಶ, ಲಕ್ಷ್ಮಿ, ವಿಶ್ಮಕರ್ಮರಿಗೆ ಸಲ್ಲಿಸಿ ಬಳಿಕ ಪ್ರಾರ್ಥನೆ ಸಲ್ಲಿಸಿ ಅಡಿಪಾಯ ತುಂಬುವ ಸಮಾರಂಭ ನಡೆಸಿದರು.
ಗರ್ಭಗುಡಿಯನ್ನು ಒಳಗೊಂಡಂತೆ ರಾಮ ಮಂದಿರಕ್ಕೆ 2.77 ಎಕರೆ ಭೂಮಿಯಲ್ಲಿ ಅಡಿಪಾಯ ನಿರ್ಮಾಣವನ್ನು ಪ್ರಾರಂಭಿಸುವ ಅಧಿಕೃತ ದಿನಾಂಕವನ್ನು ಏಪ್ರಿಲ್ 9 ಕ್ಕೆ ನಿಗದಿಪಡಿಸಲಾಗಿದ್ದರೂ, ಅಡಿಪಾಯ ತುಂಬುವಿಕೆಯ ಆರಂಭವನ್ನು ಗುರುತಿಸಲು 40 ಅಡಿ ಅಡಿಪಾಯದಲ್ಲಿ ನಿನ್ನೆ ಒಂದು ಅಡಿ ಕಾಂಕ್ರೀಟ್ ಹಾಕಲಾಯಿತು.
ಅಡಿಪಾಯದ ಒಂದು ಅಡಿ ತುಂಬಲು ಸಿಲಿಕಾನ್, ಸಿಮೆಂಟ್, ಮೌರಾಂಗ್ ಮತ್ತು ಕಾಂಕ್ರೀಟ್ ಮಿಶ್ರಣವನ್ನು ಬಳಸಲಾಯಿತು. ನಂತರ ಲಾರ್ಸೆನ್ ಮತ್ತು ಟೂರ್ಬೊದ ಎಂಜಿನಿಯರ್ಗಳು ಪರಿಶೀಲಿಸಿದರು.
The work to fill the foundation for construction of Shri Ram Mandir commenced with Vaidic Pujan at Shri Ram Janmbhoomi today.
Office bearers of Shri Ram Janmbhoomi Teerth Kshetra and Senior Govt officials were present on the occasion. pic.twitter.com/jGMxE7tLKx
— Shri Ram Janmbhoomi Teerth Kshetra (@ShriRamTeerth) March 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.