ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎರಡು ಭಯೋತ್ಪಾದಕ ಮಾಡ್ಯೂಲ್ಗಳನ್ನು ಭೇದಿಸಿದ್ದಾರೆ ಮತ್ತು ಐಇಡಿ ಸ್ಫೋಟಗಳು ನಡೆಯುವುದನ್ನು ತಡೆಗಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ತೀವ್ರಗಾಮಿ ಮತ್ತು ಭಯೋತ್ಪಾದನೆಯತ್ತ ಸೆಳೆಯಲ್ಪಟ್ಟ ಏಳು ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಐಇಡಿ ಸ್ಫೋಟಗಳನ್ನು ನಡೆಸಲು ಯೋಜಿಸುತ್ತಿದ್ದ ಭಯೋತ್ಪಾದಕರ ಎರಡು ಭಯೋತ್ಪಾದಕ ಮಾಡ್ಯೂಲ್ಗಳನ್ನು ಕಳೆದ ಕೆಲವು ದಿನಗಳಲ್ಲಿ ಅವಂತಿಪೋರಾ ಪೊಲೀಸರು ಭೇದಿಸಿದ್ದಾರೆ ಎಂದು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಡ್ಯೂಲ್ಗಳಲ್ಲಿ ಒಂದು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು, ಇದು ಪಂಪೋರ್ ಪ್ರದೇಶದಲ್ಲಿ ಅಥವಾ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಎಲ್ಲೋ ಕಾರ್ ಬಾಂಬ್ ಸ್ಫೋಟವನ್ನು ಯೋಜಿಸುತ್ತಿತ್ತು ಎನ್ನಲಾಗಿದೆ.
ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಸಾಹಿಲ್ ನಜೀರ್ ಎಂಬಾತನಿಗೆ ಟೆಲಿಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳ ಮೂಲಕ ಭಯೋತ್ಪಾದಕರು ಸೆಕೆಂಡ್ ಹ್ಯಾಂಡ್ ಕಾರನ್ನು ನಿರ್ವಹಿಸಲು ಪ್ರೇರೇಪಿಸುತ್ತಿದ್ದರು. ಅಲ್ಲದೇ, ಆತನಿಗೆ ಹಣ ನೀಡಿದ್ದರು ಮತ್ತು ಉತ್ತರ ಕಾಶ್ಮೀರದಿಂದ ತರಲಾಗುತ್ತಿರುವ ಸ್ಫೋಟಕಗಳನ್ನು ವಾಹನದಲ್ಲಿ ಅಳವಡಿಸುವ ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ.
ನಜೀರ್ನನ್ನು ಅವತಿಪೋರಾ ಪೊಲೀಸರು ಬಂಧಿಸಿದ ಬಳಿಕ ಸಂಪೂರ್ಣ ಷಡ್ಯಂತ್ರ ಹೊರ ಬಂದಿದೆ. ಆತ ನೀಡಿದ ಮಾಃಇತಿಯ ಮೇರೆಗೆ ಇತರರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.