ನವದೆಹಲಿ: ಭಾರತವು ಉತ್ತಮ ಗುಣಮಟ್ಟದ ಕಂಟೇನರ್ಗಳ ಕೊರತೆಯನ್ನು ನೀಗಿಸಲು ಕಂಟೇನರ್ಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲು ಮುಂದಾಗಿದೆ ಎಂದು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ತಿಳಿಸಿದ್ದಾರೆ.
“ಸ್ಥಳೀಯ ಕಂಟೈನರ್ಗಳ ಉತ್ಪಾದನೆ” ಕುರಿತು ವೆಬ್ನಾರ್ನ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗೋಯಲ್, ಭಾರತೀಯ ಉದ್ಯಮದ ಜೀವನ ರೇಖೆಯಾದ ಉತ್ತಮ ಲಾಜಿಸ್ಟಿಕ್ಗಾಗಿ ದೇಶದಲ್ಲಿ ಜಿಪಿಎಸ್ ಆಧಾರಿತ ಕಂಟೇನರ್ಗಳನ್ನು ಸಕ್ರಿಯಗೊಳಿಸುವಂತೆ ಕರೆ ನೀಡಿದರು.
ಭಾರತದಂತಹ ದೊಡ್ಡ ದೇಶವು ಹೆಚ್ಚಿನ ಬೆಳವಣಿಗೆಯ ಹಾದಿಯಲ್ಲಿದೆ ಆದರೆ ರಫ್ತಿಗೆ ಕೊರತೆಯನ್ನು ಎದುರಿಸುತ್ತಿದೆ ಎಂದು ಗೋಯಲ್ ಹೇಳಿದರು. ಭಾರತದಲ್ಲಿ ಕಂಟೇನರ್ಗಳನ್ನು ತಯಾರಿಸುವ ಸಾಧ್ಯತೆಯನ್ನು ಗಂಭೀರವಾಗಿ ಅನ್ವೇಷಿಸುವ ಅಗತ್ಯವಿದೆ ಎಂದಿದ್ದಾರೆ.
ರಿಫ್ರೆಜರೇಟೆಡ್ ಕಂಟೇನರ್ಗಳ ಸ್ಥಳೀಯ ತಯಾರಿಕೆಯ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು ಮತ್ತು ಅಂತಹ ಕಂಟೇನರ್ಗಳ ಆಮದನ್ನು ಅವಲಂಬಿಸುವ ಬದಲು ಕಡಲ ಆರ್ಥಿಕತೆಯಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಅವುಗಳನ್ನು ಸ್ಥಳೀಯವಾಗಿ ತಯಾರಿಸಬೇಕು” ಎಂದು ಹೇಳಿದರು.
ಉತ್ತಮ ಗುಣಮಟ್ಟದ ಕಂಟೇನರ್ಗಳನ್ನು ತಯಾರಿಸಲು ಕಾರ್ಟೆನ್ 6 ಗುಣಮಟ್ಟದ ಉಕ್ಕಿನ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ಗೋಯಲ್ ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.