ಚಂಡೀಗಢ: ಹರಿಯಾಣದ ಧನಿ ಮಿಯಾನ್ ಖಾನ್ ಗ್ರಾಮದಲ್ಲಿ ನೆಲೆಸಿದ ಸುಷ್ಮಾ ಭಾಡು ಈಗ ಈ ಗ್ರಾಮದ ಸರ್ಪಂಚ್ ಆಗಿದ್ದಾರೆ. ಹೆಣ್ಣು ಮಕ್ಕಳೆಂದರೆ ತಿರಸ್ಕಾರ ಮನೋಭಾವ ಹೊಂದಿರುವ ಹರಿಯಾಣದಲ್ಲಿ ಜನಿಸಿದ ಸುಷ್ಮಾ ಭಾಡು ಮಹಿಳೆಯರ ಹಕ್ಕುಗಳು ಮತ್ತು ಹೆಣ್ಣುಮಕ್ಕಳ ಉಳಿವಿಗಾಗಿ ತಮ್ಮ ಗ್ರಾಮದ ಧನಿ ಮಿಯಾನ್ ಖಾನ್ ಪಂಚಾಯತ್ ಅನ್ನು ಮಾದರಿಯಾಗುವಲ್ಲಿ ಶ್ರಮಿಸಿದ್ದಾರೆ.
2010ರಲ್ಲಿ ಮೂರು ಗ್ರಾಮಗಳಾದ ಸಲಾಮ್ ಖೇರಾ, ಚಬ್ಲಮೋರಿ ಮತ್ತು ಧನಿ ಮಿಯಾನ್ ಖಾನ್ ಸರಪಂಚ್ ಆಗಿ ಚುನಾಯಿತರಾದ ಸುಷ್ಮಾ ಭಾಡು ಅವರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಪರದೆಯಿಂದ ಮುಖವನ್ನು ಮುಚ್ಚಿಕೊಳ್ಳಬೇಕು ಎನ್ನುವ ಶತಮಾನದ ಹಿಂದಿನ ಸಂಪ್ರದಾಯದ ವಿರುದ್ಧ ಹೋರಾಡಿದರು.
ಮೂರು ಮಕ್ಕಳ ತಾಯಿಯಾಗಿರುವಾಗ ಇವರು ಟೈಲರಿಂಗ್ ತರಬೇತಿ ಕೇಂದ್ರಗಳನ್ನುಸ್ಥಾಪಿಸಿ ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರಯತ್ನಿಸಿದರು. ಪ್ರತಿ ಹಳ್ಳಿಯ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತೆ ಪ್ರಯತ್ನಿಸಿದರು. ಹಳ್ಳಿಯನ್ನು ಸ್ವಚ್ಛವಾಗಿಡುವ ಇವರ ಪರಿಕಲ್ಪನೆಯ ಪ್ರಯತ್ನದ ಫಲವಾಗಿ ನಿರ್ಮಲ್ ಪುರಸ್ಕಾರ್ ಪ್ರಶಸ್ತಿಗೆ ಗ್ರಾಮ ಆಯ್ಕೆಯಾಯಿತು. ಇಲ್ಲಿನ ಅನೇಕ ಹಳ್ಳಿಗಳು ಲಿಂಗ ಅನುಪಾತದ ಸಮತೋಲನಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.