ರಾಯ್ಬರೇಲಿ: ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿಯಾಗಿ ಬದುಕುವ ದೃಢ ನಿಶ್ಚಯ ಮಾಡಕೊಂಡಿರುವ 98 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಉತ್ತರಪ್ರದೇಶದ ರಾಯ್ಬರೇಲಿಯ ರಸ್ತೆ ಬದಿಯಲ್ಲಿ ಕಡಲೆ ಮಾರಾಟ ಮಾಡುತ್ತಿದ್ದಾರೆ. ಅವರು ತಮ್ಮ ದುಡಿಮೆಯಿಂದಲೇ ಇಲ್ಲಿ ಗುರುತಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ‘ವಿಜಯ್ ಪಾಲ್ ಸಿಂಗ್’ ಎಂಬ ಇವರು ತನ್ನ ಜೀವನವನ್ನು ತಾನೇ ನಿರ್ವಹಿಸಲು ಕಡಲೆ ಮಾರಾಟ ಮಾಡುತ್ತಾರೆ. ತನ್ನ ಮಕ್ಕಳಿಗೆ ಹೊರೆಯಾಗಲು ಅವರು ಬಯಸುತ್ತಿಲ್ಲ.
ಇತ್ತೀಚೆಗೆ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ್ ಅವರು ರಾಯ್ಬರೇಲಿಯ ಬೀದಿಗಳಲ್ಲಿ ಅಜ್ಜ ಕಡಲೆ ಮಾರಾಟ ಮಾಡುತ್ತಿರುವುದನ್ನು ನೋಡಿದ್ದಾರೆ. ಅವರನ್ನು ಮರುದಿನ ತಮ್ಮ ಕಚೇರಿಗೆ ಕರೆದಿದ್ದಾರೆ ಮತ್ತು 98 ರ ಹರೆಯದ ಈ ವಯಸ್ಸಿನಲ್ಲೂ ಸ್ವಾವಲಂಬನೆಯ ಇಚ್ಛಾಶಕ್ತಿಯೊಂದಿಗೆ ದುಡಿಯುತ್ತಿರುವ ಅವರಿಗೆ ಸನ್ಮಾನ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅಜ್ಜನಿಗೆ 11,000 ರೂ ನಗದು, ವಾಕಿಂಗ್ ಸ್ಟಿಕ್, ಶಾಲು ಮತ್ತು ಪಡಿತರ ಚೀಟಿಯನ್ನು ಹಸ್ತಾಂತರಿಸಿದ್ದಾರೆ. ಅಲ್ಲದೇ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ದೊರಕುವುದನ್ನು ಖಾತ್ರಿಪಡಿಸಿಕೊಂಡರು.
ಸಂತೋಷಗೊಂಡ ಅಜ್ಜ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಜಿಲ್ಲಾಧಿಕಾರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
ವಿಜಯ್ ಪಾಲ್ ಸಿಂಗ್ ಅವರು ರಾಯಬರೇಲಿ ಜಿಲ್ಲೆಯ ಹರ್ಚಂದ್ಪುರ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಬಾಬಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ತಮ್ಮ ಕುಟುಂಬಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಜಯ್ ಪಾಲ್ ಸಿಂಗ್ ತಮ್ಮ ಮಕ್ಕಳಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಕಡಲೆ ಮಾರಾಟ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.