ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಗಳನ್ನು ಸಂಸದ್ ಟಿವಿ ಎಂಬ ಒಂದೇ ಘಟಕದಲ್ಲಿ ವಿಲೀನಗೊಳಿಸಲಾಗಿದೆ. ಸಂಸದ್ ಟೆಲಿವಿಷನ್ನ ಅಂಡರ್ ಸೆಕ್ರೆಟರಿ ಸುನಿಲ್ ಮಿನೋಚಾ ಅವರ ಅಧಿಕೃತ ಹೇಳಿಕೆಯ ಪ್ರಕಾರ, ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನು ಒಂದು ವರ್ಷದ ಅವಧಿಗೆ ಸಂಸದ್ ಟಿವಿಯ ಸಿಇಒ ಆಗಿ ನೇಮಕ ಮಾಡಲಾಗಿದೆ.
ಆರ್ಎಸ್ಟಿವಿ ಮತ್ತು ಎಲ್ಎಸ್ಟಿವಿಗಳನ್ನು ವಿಲೀನಗೊಳಿಸಿದ ಸಂಸದ್ ಟೆಲಿವಿಷನ್ ಆಗಿ ಪರಿವರ್ತಿಸುವುದು ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭಾ ಸ್ಪೀಕರ್ ಅವರ ಜಂಟಿ ನಿರ್ಧಾರವಾಗಿದೆ. ಪರಿಣಾಮವಾಗಿ, ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನು ನೇಮಕ ಮಾಡಲಾಗಿದೆ. ಒಂದು ವರ್ಷದ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅವರು ನೇಂಕವಾಗಿದ್ದಾರೆ.
ವಿಲೀನದೊಂದಿಗೆ ರಾಜ್ಯಸಭೆ ಟಿವಿ ಸಿಇಒ ಮನೋಜ್ ಕುಮಾರ್ ಪಾಂಡೆ ಅವರನ್ನು ಕಾರ್ಯದಿಂದ ಮುಕ್ತಗೊಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನಿಯಮಗಳಂತೆ ಅವರಿಗೆ ಒಂದು ತಿಂಗಳ ವೃತ್ತಿಪರ ಶುಲ್ಕಕ್ಕೆ ಸಮನಾದ ಮೊತ್ತವನ್ನು ನೀಡಲಾಗುತ್ತದೆ.
ಲೋಕಸಭೆ ಮತ್ತು ರಾಜ್ಯಸಭಾ ಅಧಿವೇಶನಗಳ ನೇರ ಪ್ರಸಾರವನ್ನು ನೀಡಲು ಸಂಸದ್ ಟಿವಿ ಎರಡು ಚಾನೆಲ್ ಹೊಂದಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.