ನವದೆಹಲಿ: ದೇವಾಲಯಗಳನ್ನು ತಮ್ಮ ಹಿಡಿತದಿಂದ ಮುಕ್ತಗೊಳಿಸುವಂತೆ ಆಧ್ಯಾತ್ಮಿಕ ಮುಖಂಡ ಮತ್ತು ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ದೇವಾಲಯಗಳನ್ನು ಸಮುದಾಯಗಳು ನಿರ್ವಹಿಸಬೇಕು” ಎಂದು ಅವರು ಹೇಳಿದ್ದಾರೆ.
ಹಿಂದೂಗಳ ದೇವಾಲಯದ ಪ್ರಾಮುಖ್ಯತೆ ಮತ್ತು ಅಗತ್ಯವನ್ನು ಒತ್ತಿ ಹೇಳಿದ ಸದ್ಗುರು, “ದೇವಾಲಯವು ಪ್ರಾರ್ಥನೆಗಾಗಿ ಇರುವ ಕೇಂದ್ರಗಳಲ್ಲ, ಅದು ಹಿಂದೂ ಸಮುದಾಯದ ಆತ್ಮವಾಗಿದೆ” ಎಂದು ಹೇಳಿದರು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಸಂದೇಶದಲ್ಲಿ ಸದ್ಗುರು, ತಮಿಳುನಾಡಿನಲ್ಲಿ ಅನೇಕ ದೇವಾಲಯಗಳು ನಿಧಾನವಾಗಿ ನಶಿಸುತ್ತಿವೆ ಮತ್ತು ಅವುಗಳನ್ನು ಜೀವಂತಗೊಳಿಸಲು ಭಕ್ತರ ಹಸ್ತಕ್ಷೇಪ ತುರ್ತಾಗಿ ಅಗತ್ಯವಿದೆ ಎಂದು ಹೇಳಿದರು.
ತಮಿಳುನಾಡಿನ ದೇವಾಲಯಗಳು ಮತ್ತು ದೇವಾಲಯ ನಿರ್ವಹಣೆಯ ಕಳಪೆ ಸ್ಥಿತಿಯನ್ನು ಎತ್ತಿ ತೋರಿಸಿದ ಸದ್ಗುರು, “ಒಂದೇ ಒಂದು ಪೂಜೆ ನಡೆಯದೆ 11,999 ದೇವಾಲಯಗಳು ನಸಿಸುತ್ತಿದೆ. 34,000 ದೇವಾಲಯಗಳು ವರ್ಷಕ್ಕೆ 10,000 ರೂಗಿಂತಲೂ ಕಡಿಮೆ ಆದಾಯ ಹೊಂದಿವೆ. 37,000 ದೇವಾಲಯಗಳಲ್ಲಿ ಪೂಜೆ, ನಿರ್ವಹಣೆ, ಭದ್ರತೆ ಇತ್ಯಾದಿಗಳಿಗೆ ಕೇವಲ ಒಬ್ಬ ವ್ಯಕ್ತಿ ಇದ್ದಾನೆ! ” ಎಂದಿದ್ದಾರೆ.
ಈಸ್ಟ್ ಇಂಡಿಯಾ ಕಂಪನಿ 1700 ರ ದಶಕದಲ್ಲಿ ಶ್ರೀಮಂತ ಭಾರತೀಯ ದೇವಾಲಯಗಳ ಸಂಪತ್ತನ್ನು ಹೇಗೆ ಲೂಟಿ ಮಾಡಿದೆ ಎಂದು ಅವರು ವಿವರಿಸಿದ್ದಾರೆ. “ಸ್ವಾತಂತ್ರ್ಯದ ನಂತರ ಚಿತ್ರಣ ಏನೂ ಬದಲಾಗಿಲ್ಲ” ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ದೇವಾಲಯಗಳ ಸಾಂಸ್ಕೃತಿಕ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ ಅವರು, ರಾಜ್ಯದ ಪಟ್ಟಣಗಳನ್ನು ದೇವಾಲಯಗಳ ಸುತ್ತಲೂ ನಿರ್ಮಿಸಲಾಗಿದೆ, ಒಂದು ಪಟ್ಟಣವನ್ನು ಅಭಿವೃದ್ಧಿಪಡಿಸಿ ನಂತರ ಅಲ್ಲಿ ದೇವಾಲಯವನ್ನು ನಿರ್ಮಿಸಲಾಗಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.