ಉಜ್ಜೈನಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, ಹಾಗೆಯೇ ಜ್ಞಾನಾರ್ಜನೆಗೂ ವಯಸ್ಸಿನ ಹಂಗಿಲ್ಲ. ವಿದ್ಯೆ ಮತ್ತು ಜ್ಞಾನ ಎಂಬುದು ಸಾಗರದಂತೆ ನಾವು ನಮ್ಮ ಬೊಗಸೆಯಲ್ಲಿ ತುಂಬುವಷ್ಟು ನೀರನ್ನು ಮಾತ್ರ ತೆಗೆದುಕೊಳ್ಳಬಹುದು. ಆದರೆ ಅದೆಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ನಾವೆಷ್ಟು ಬಾರಿ ತೆಗೆದುಕೊಂಡರೂ ಸಾಗರದ ನೀರು ಖಾಲಿಯಾಗುವುದಿಲ್ಲ. ಜ್ಞಾನಾರ್ಜನೆಗೆಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತನ್ನು ಉತ್ತರ ಉಜ್ಜಯಿನಿಯ ಶಶಿಕಲಾ ರಾವತ್ ಎನ್ನುವ 80 ವಯಸ್ಸಿನ ಮಹಿಳೆ ಪಿಎಚ್ಡಿ ಪದವಿಯನ್ನು ಪಡೆಯುವ ಮೂಲಕ ನಿಜವಾಗಿಸಿದ್ದಾರೆ.
ಮೂಲತಃ ಪ್ರಾಧ್ಯಾಪಕಿಯಾಗಿದ್ದ ಶಶಿಕಲಾ ,ತಮ್ಮ ಹುದ್ದೆಯಿಂದ ನಿವೃತ್ತಿಯನ್ನು ಹೊಂದಿದ ಬಳಿಕ ಈ ಸಾಧನೆಯನ್ನು ಮಾಡಿದ್ದಾರೆ ಎಂಬುದು ಬಹುತೇಕ ಎಲ್ಲರೂ ಹುಬ್ಬೇರಿಸುವ ವಿಚಾರವೇ ಸರಿ. 2009 ರಿಂದ 2011ರ ವರೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದ ಬಳಿಕ ಅವರು ಜ್ಞಾನಾರ್ಜನೆಯನ್ನು ನಿಲ್ಲಿಸಲಿಲ್ಲ. ಜ್ಯೋತಿಷ್ಯಾಚಾರ್ಯ ವರಾಹಮಿಹಿರರಿಂದ ರಚಿಸಲ್ಪಟ್ಟ “ಬೃಹತ್ ಸಂಹಿತಾ” ಗ್ರಂಥದ ಕುರಿತಾಗಿ ಅವರು ತಮ್ಮ ಸಂಶೋಧನೆಯನ್ನು ನಡೆಸಿದ್ದರು. 2019 ರಲ್ಲಿ ಅವರು ಯಶಸ್ವಿಯಾಗಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದರು.
ಬೃಹತ್ ಸಂಹಿತಾ ಗ್ರಂಥದ ಮೂಲಕ ಗಮನಿಸಿದಂತೆ ಸಾಮಾಜಿಕ ಜೀವನ ಎಂಬ ವಿಚಾರದ ಮೇಲೆ ಮಿಥಿಲಾ ಪ್ರಸಾದ್ ತ್ರಿಪಾಠಿ ಅವರ ಮಾರ್ಗದರ್ಶನದೊಂದಿಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಶಶಿಕಲಾ ಅವರು ವಿಕ್ರಂ ವಿಶ್ವ ವಿದ್ಯಾಲಯದಲ್ಲಿ ಎಂ ಎ ಜ್ಯೋತಿಷ್ಯ ಶಾಸ್ತ್ರ ಪದವಿಯನ್ನು ಪಡೆದರು. 30 ವರ್ಷಕ್ಕೆ ಇನ್ನೇನು ಓದುವುದು ಎಂದು ವಯಸ್ಸಾಯಿತು ಎಂದು ಜ್ಞಾನಾರ್ಜನೆಯ ಕುರಿತಾಗಿ ಔದಾಸೀನ್ಯ ತೋರುವ ಯುವ ಪೀಳಿಗೆಗೆ ಶಶಿಕಲಾ ಅವರು ನಿಜಕ್ಕೂ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.