News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ.8 : ಸವಣೂರಿನಲ್ಲಿ ಅಡಿಕೆ ತೋಟದಲ್ಲಿ ಹೈಡ್ರಾಲಿಕ್ ಲಿಪ್ಟ್ ಪ್ರಾತ್ಯಕ್ಷಿಕೆ

ಪುತ್ತೂರು : ಅಡಿಕೆಗೆ ಔಷಧಿ ಸಿಂಪಡಣೆ ಹಾಗೂ ಕಟಾವಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ಬಳಸಿ ಹೈಡ್ರಾಲಿಕ್ ಲಿಪ್ಟ್‌ನ ಬಳಕೆ ಮತ್ತು ಪ್ರದರ್ಶನ ಎ.8 ರಂದು ಸವಣೂರಿನ ಗೋಕುಲಂ ಫಾಮ್ಸ್‌ನಲ್ಲಿ ನಡೆಯಲಿದೆ ಎಂದು ಕೃಷಿಕ , ಯಂತ್ರವನ್ನು ಆವಿಷ್ಕಾರ ಮಾಡಿದ ಎ.ಆರ್.ಚಂದ್ರ ತಿಳಿಸಿದ್ದಾರೆ.

A-R-Chandra

ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಕೃಷಿಕರಿಗೆ ಅನುಕೂಲವಾಗುವಂತಹ ಈ ಆವಿಷ್ಕಾರವನ್ನು ರಾಜ್ಯದಲ್ಲೇ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೊದಲ ಬಾರಿಗೆ ಮಾಡಲಾಗಿದೆ ಎಂದ ಅವರು ಕಳೆದ ಹಲವು ವರ್ಷಗಳಿಂದ ಅಡಿಕೆ ಬೆಳೆಗಾರನಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಈ ಸಮಯದಲ್ಲಿ ಮಂಗಳೂರಿನ ಕೂಳೂರಿನಲ್ಲಿರುವ ಶಂಕರ್ ಇಂಡಸ್ಟ್ರೀಸ್‌ನ ದೇವರಾಜ್ ಮಾನಾಯಿ ಅಡಿಕೆ ತೋಟದಲ್ಲಿ ಚಾಲೂ ಆಗುವಂತಹ ಹೈಡ್ರೋಲಿಕ್ ಲಿಫ್ಟ್ ತಯಾರು ಮಾಡಿದರು.ಟ್ಯಾಕ್ಟರ್ ಸೇರಿ ಒಟ್ಟು 10 ಲಕ್ಷ ಅಂದಾಜು ವೆಚ್ಚ ತಗಲುತ್ತದೆ ಎಂದು ಅವರು ವಿವರಿಸಿದರು.

ತೋಟದಲ್ಲಿ ಸರಾಗವಾಗಿ ಓಡಾಡುವ ಟ್ರ್ಯಾಕ್ಟರ್‌ನಲ್ಲಿಯೇ ಔಷಧಿಯ ಬ್ಯಾರೆಲ್, ಸಿಂಪಡಣಾ ಯಂತ್ರವೂ ಇರುತ್ತದೆ.ಇದನ್ನು ಮಾರಾಟದ ಉದ್ದೇಶದಿಂದ ತಯಾರಿಸಿಲ್ಲ.ರಾಜ್ಯದ ರೈತರಿಗೆ ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾವೇರಿ ಮೊದಲಾದ ಕಡೆಯಿಂದ ರೈತರು ಯಂತ್ರದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನಷ್ಟು ಸಂಶೋದನೆಗೆ ಒಳಪಡಿಸಿ, ಹೆಚ್ಚು ಅನುಕೂಲ ಪಡೆಯುವ ಇರಾದೆ ಇದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಸವಣೂರು ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಅಶ್ವಿನಿ ಫಾರ್ಮ್ಸ್‌ನ ರಾಜಾರಾಮ ಪ್ರಭು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top