ಶಿವಮೊಗ್ಗ: ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಇಂದು ಸಹ್ಯಾದ್ರಿ ಕಾಲೇಜಿನಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಪಾಯ ಕಲ್ಲು ಹಾಕಲಿದ್ದಾರೆ ಮತ್ತು ಶಿವಮೊಗ್ಗದ ನೆಹರು ಕ್ರೀಡಾಂಗಣದ ಉನ್ನತೀಕರಣಕ್ಕೆ ಚಾಲನೆ ನೀಡಲಿದ್ದಾರೆ.
ಕರ್ನಾಟಕಕ್ಕೆ ತಾನು ಎರಡು ದಿನಗಳ ಕಾಲ ಭೇಟಿ ನೀಡುತ್ತಿರುವ ವಿಷಯವನ್ನು ಕಿರೆನ್ ರಿಜ್ಜು ಅವರು ಕನ್ನಡದಲ್ಲೇ ಟ್ವಿಟ್ ಮಾಡಿ ಹೇಳಿದ್ದಾರೆ.
“ನಾಳೆಯಿಂದ 2 ದಿನಗಳ ಕಾಲ ಕರ್ನಾಟಕದ ಸಂಸ್ಕೃತಿಗೆ ಪ್ರತಿಬಿಂಬವಾಗಿರುವ ಶಿವಮೊಗ್ಗ ಜಿಲ್ಲೆ & ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಈ ಪ್ರವಾಸದಲ್ಲಿ ಖೆಲೋ ಇಂಡಿಯಾ & ಫಿಟ್ಟ್ ಇಂಡಿಯಾ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಜನತೆಯ ಜೊತೆಗೆ ಭಾಗವಹಿಸಲು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
“ಮಲೆನಾಡು” ಶಿವಮೊಗ್ಗಕ್ಕೆ ಕಿರೆನ್ ರಿಜ್ಜು ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಟ್ವಿಟ್ ಮಾಡಿದ್ದಾರೆ.
ನಾಳೆಯಿಂದ 2 ದಿನಗಳ ಕಾಲ ಕರ್ನಾಟಕದ ಸಂಸ್ಕೃತಿಗೆ ಪ್ರತಿಬಿಂಬವಾಗಿರುವ ಶಿವಮೊಗ್ಗ ಜಿಲ್ಲೆ & ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಈ ಪ್ರವಾಸದಲ್ಲಿ ಖೆಲೋ ಇಂಡಿಯಾ & ಫಿಟ್ಟ್ ಇಂಡಿಯಾ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಜನತೆಯ ಜೊತೆಗೆ ಭಾಗವಹಿಸಲು ಉತ್ಸುಕನಾಗಿದ್ದೇನೆ.@BSYBJP @ikseshwarappa @BYRBJP @Tejasvi_Surya https://t.co/gI9KyYJe5i
— Kiren Rijiju (@KirenRijiju) February 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.